ರಾಹುಲ್ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ ಸ್ಮೃತಿ ಇರಾನಿ

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜಕೀಯದಲ್ಲಿ ಮೊದಲ ಅಪಸ್ವರ ಕೇಳಿ ಬರುವುದೇನೆಂದರೆ ಅಧಿಕಾರ ಪಾರ್ಟಿಯ ಕ್ಷೇತ್ರಗಳಿಗೆ ಅನುದಾನ ನೀಡಿದಷ್ಟು ವಿರೋಧಪಕ್ಷಗಳ ಅಥವಾ ಇತರೆ ಪಕ್ಷಗಳ ಕ್ಷೇತ್ರಗಳಿಗೆ  ಅನುದಾನ ವಾಗಲಿ  ಅಥವಾ ಅಭಿವೃದ್ಧಿ ಮಾಡುವ ಇಂಗಿತವನ್ನು ಸಹ ಯಾರೂ ವ್ಯಕ್ತಪಡಿಸು ವುದಿಲ್ಲ ಎಂದು ಪ್ರತಿ ಬಾರಿಯೂ ಅಪಸ್ವರಗಳು ಕೇಳಿ ಬರುತ್ತಿರುತ್ತವೆ.

ಆದರೆ ಮೋದಿ ಸರ್ಕಾರ ಇದುವರೆಗೂ ಯಾವುದೇ ಮಲತಾಯಿ ಧೋರಣೆಯನ್ನು ಮಾಡದೆ ಅಧಿಕಾರ ನಡೆಸುತ್ತಾ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವವರೆಗೂ ಬಹಳ ಯೋಜನೆಗಳನ್ನು ಜಾರಿಗೊಳಿಸಿ ಜನರ ಬೆಂಬಲಕ್ಕೆ ನಿಂತಿತ್ತು. ಅದರಂತೆಯೇ ಈಗ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾದ  ರಾಹುಲ್ ಗಾಂಧಿ ರವರ ಕ್ಷೇತ್ರಕ್ಕೆ ದೊಡ್ಡ ಉಡುಗೊರೆಯನ್ನು ನೀಡಲು ಸ್ಮೃತಿ ಇರಾನಿ ರವರು ಮುಂದಾಗಿದ್ದಾರೆ.

ಉತ್ತರ ಪ್ರದೇಶದ ಅಮೇಥಿ ಹಳ್ಳಿಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಿ ಇನ್ನೂರಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳ ಲಾಭವನ್ನು ಅಮೇಥಿ ಜನರಿಗೆ ನೀಡಲು ಸ್ಮೃತಿ ಇರಾನಿರವರು ಮುಂದಾಗಿದ್ದಾರೆ.ಇದರ ಜೊತೆಗೆ ವೈಫೈ ಸೌಲಭ್ಯವನ್ನು ಕಲ್ಪಿಸಲು ನಿರ್ಧರಿಸಿರುವ ಸ್ಮೃತಿ ಇರಾನಿರವರು ಅಮೇಥಿಯ ಮುಖ್ಯ ಅಂಚೆ ಕಚೇರಿಯಲ್ಲಿ ಡಿಜಿಟಲ್ ಇಂಡಿಯಾ ಬ್ಯಾಂಕಿಂಗ್ ಸರ್ವಿಸನ್ನು ಉದ್ಘಾಟಿಸಲು ನಿರ್ಧರಿಸಿದ್ದಾರೆ.

ಇದರಿಂದ ಮತ್ತೊಮ್ಮೆ ಮೋದಿ ಸರ್ಕಾರವು ತನ್ನ ಕ್ಷೇತ್ರ ಅಥವಾ ಪರರ ಕ್ಷೇತ್ರ ಎಂಬುದನ್ನು ತಾರತಮ್ಯ ಮಾಡದೆ ಅಭಿವೃದ್ಧಿಯೇ ಧ್ಯೇಯ ಎಂದು ಮುಂದುವರಿದಂತಿದೆ.