ಮುಂದಿನ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಸೋಲು ಖಚಿತ- ಮಾಸ್ಟರ್ ಪ್ಲಾನ್ ಮಾಡಿದ ಬಿಜೆಪಿ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಸೋಲು ಖಚಿತ- ಮಾಸ್ಟರ್ ಪ್ಲಾನ್ ಮಾಡಿದ ಬಿಜೆಪಿ

0

ಕಾಂಗ್ರೆಸ್ ನಲ್ಲಿ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ರವರಿಗೆ ಬಿಜೆಪಿ ಪಕ್ಷವು ಮಾಸ್ಟರ್ ಸ್ಟ್ರೋಕ್ ನೀಡಲು ಸಿದ್ಧವಾಗಿದೆ.ಈ ಪ್ಲಾನ್  ಖಂಡಿತವಾಗಿಯೂ ಫಲ ನೀಡುತ್ತದೆ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ. ಒಂದು ವೇಳೆ ಇದೇ ನಡೆದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ  ಖರ್ಗೆ  ರವರಿಗೆ ಸೋಲು ಖಚಿತ ಎಂದು ಅಂದಾಜಿಸಲಾಗುತ್ತಿದೆ.

ಅಷ್ಟಕ್ಕೂ ವಿಷಯದ ಮೂಲವೇನು ಮತ್ತು ವಿವರಗಳನ್ನು ತಿಳಿಯಲು ಕೆಳಗಡೆ ಓದಿ.

ಮಲ್ಲಿಕಾರ್ಜುನ ಖರ್ಗೆ ರವರ ಗೆಲುವು ಸಾಧಿಸಲು ಪ್ರಮುಖ ವೋಟ್ ಬ್ಯಾಂಕ್ ಗಳಾದ ಕೆಲವು ಸಮುದಾಯದ ಮತಗಳನ್ನು ಬಿಜೆಪಿ ಪಕ್ಷವು ತನ್ನತ್ತ ಸೆಳೆಯಲು ಪ್ಲಾನ್ ಒಂದು ಮಾಡಿದೆ. ಪ್ರತಿ ಚುನಾವಣೆಯಲ್ಲಿಯೂ ಮಲ್ಲಿಕಾರ್ಜುನ ಖರ್ಗೆ ರವರಿಗೆ ಈ ಸಮುದಾಯದ ಮತಗಳು ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿವೆ.

ಈ ಎಡ ಸಮುದಾಯದ ಮತಗಳನ್ನು ತನ್ನತ್ತ ಸೆಳೆಯಲು ನಿರ್ಧರಿಸಿರುವ ಬಿಜೆಪಿ ಪಕ್ಷವು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಕರ್ನಾಟಕ ನಿವೃತ್ತ ಮುಖ್ಯ ದರ್ಶಿ ರತ್ನಪ್ರಭಾ ರವರಿಗೆ ಟಿಕೆಟ್ ನೀಡಲು ಮುಂದಾಗಿದೆ.  ಇದರೊಂದಿಗೆ ಸಮುದಾಯದ ಮತಗಳು ಮತ್ತು ಪ್ರಜ್ಞಾವಂತರ ಮತಗಳು ಬಿಜೆಪಿ ಪಕ್ಷಕ್ಕೆ  ಸುಲಭವಾಗಿ ದಕ್ಕಲಿವೆ.

ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ ರವರಿಗೆ ಸೋಲುಣಿಸಲು ಬಿಜೆಪಿ ಪಕ್ಷವು ಈ ನಿರ್ಧಾರವನ್ನು ಕೈಗೊಂಡಿದೆ ಎಂಬುದು  ಎಲ್ಲರ ವಾದವಾಗಿದೆ. ಇದರೊಂದಿಗೆ ಕಾಂಗ್ರೆಸ್ ಪಕ್ಷ ಗೆದ್ದು ಬಂದಲ್ಲಿ ತನಗೆ ಒಳ್ಳೆಯ ಹುದ್ದೆ ಸಿಗುತ್ತದೆ ಎಂದು ನಂಬಿದ್ದ ಖರ್ಗೆರವರಿಗೆ ಈಗ ತಮ್ಮ ಸಂಸದ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟವಾಗಿ ಪರಿಣಮಿಸಿದೆ.