ಹೌದು ನೀವು ಓದುತ್ತಿರುವುದು ನಿಜ ಇನ್ನು ಮುಂದೆ ಇಡೀ ದಕ್ಷಿಣ ಭಾರತವು ಬರ ಮುಕ್ತವಾಗಲಿದೆ. ಅದರಲ್ಲಿಯೂ ಕನ್ನಡದ ಜನ ಬಂಪರ್ ಆಫರ್ ಹೊಡೆದಿದ್ದಾರೆ. ಮೋದಿ ರವರ ಈ ಹೊಸ ಮಹಾತ್ವಾಕಾಂಕ್ಷೆ ಯೋಜನೆ ಕೆಲವೇ ಕೆಲವು ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಗಡ್ಕರಿ ಅವರು ತಿಳಿಸಿದ್ದಾರೆ. ಇದರಿಂದ ಹಲವು ರಾಜ್ಯಗಳು ಬರ ಮುಕ್ತವಾದರೆ, ಕರ್ನಾಟಕ ರಾಜ್ಯದ ಜನರು ನೀರಿಗೆ ಪರ ರಾಜ್ಯಗಳ ಜೊತೆ ಹೋರಾಡುವುದು ತಪ್ಪಲಿದೆ.
[do_widget id=et_ads-2]
ಅಷ್ಟಕ್ಕೂ ಏನದು ಯೋಜನೆ ಮತ್ತು ಅದರ ಸಂಪೂರ್ಣ ವಿವರಗಳನ್ನು ತಿಳಿಯಲು ಒಮ್ಮೆ ಓದಿ.
ಇಡೀ ದೇಶದಲ್ಲಿ ರುವ 60 ಈ ನದಿಗಳ ಜೋಡಣೆಗೆ ಅಸ್ತು ಎಂದಿದ್ದ ಮೋದಿ ಸರ್ಕಾರ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದೆ. 60 ನದಿಗಳ ಜೋಡಣೆ ಒಂದೇ ಬಾರಿ ಕಷ್ಟ ಸಾಧ್ಯ ಎಂಬುದನ್ನು ಅರಿತ ಮೋದಿ ಸರ್ಕಾರ ಮೊದಲ ಹಂತದಲ್ಲಿ 30 ನದಿಗಳನ್ನು ಆರಿಸಿ ಅದರಲ್ಲಿ ಪ್ರತಿಯೊಂದು ಹಂತದಲ್ಲೂ 5 ನದಿಗಳನ್ನು ಜೋಡನೆ ಮಾಡಿಕೊಂಡು ನಂತರ ಪ್ರತಿಯೊಂದು ನದಿಗಳನ್ನು ಜೋಡಣೆ ಮಾಡಲು ನಿರ್ಧರಿಸಿದೆ. ಅದರಂತೆಯೇ ನೀರಿನ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿನ ನದಿಗಳನ್ನು ಜೋಡಿಸಲು ಕೇಂದ್ರಸರ್ಕಾರ ಬದ್ಧವಾಗಿದೆ’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು
[do_widget id=et_ads-3]
ಮೊದಲ ಹಂತದಲ್ಲಿ ಕನ್ನಡಿಗರು ಬಂಪರ್ ಹೊಡೆದಿದ್ದಾರೆ.
ಮೊದಲ ಹಂತದಲ್ಲಿ ಆಯ್ದ ಐದು ನದಿಗಳಲ್ಲಿ ಕರ್ನಾಟಕದ ಕಾವೇರಿ ನದಿಯು ಸಹ ಸೇರಿಕೊಂಡಿದೆ, ಕಾವೇರಿ ನದಿಗೆ ಸದ್ಯ 5 ನದಿಗಳನ್ನು ಜೋಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಈ ಯೋಜನೆಯು ಈಗಾಗಲೇ ಪ್ರಾರಂಭವಾಗಿದ್ದು ಸರ್ವೇ ಕಾರ್ಯ ನಡೆಯುತ್ತಿದೆ. ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಸರ್ವೇ ಕಾರ್ಯ ಮುಗಿಯಲಿದ್ದು ಬರೋಬ್ಬರಿ ಎರಡು ಲಕ್ಷ ಕೋಟಿ ವೆಚ್ಚದಲ್ಲಿ ನದಿಗಳ ಜೋಡಣೆ ಕಾರ್ಯ ಮಾರ್ಚ್ ತಿಂಗಳ ಒಳಗೆ ಪ್ರಾರಂಭವಾಗಲಿದೆ.
[do_widget id=et_ads-4]
ಇದರಿಂದಾಗಿ ಕರ್ನಾಟಕದಲ್ಲಿರುವ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ ಪರ ರಾಜ್ಯಗಳ ಜೊತೆ ಹೋರಾಡುವುದು ತಪ್ಪಲಿದೆ. ದಯವಿಟ್ಟು ಶೇರ್ ಮಾಡಿ ಪ್ರತಿಯೊಬ್ಬರಿಗೂ ಸುದ್ದಿ ತಲುಪಿಸಿ
[do_widget id=et_ads-5]