ಉತ್ತರಿಸಿ ದೇವೇಗೌಡರೇ: ಸವಾಲೆಸೆದ ಬಿಎಸ್ ವೈ

ಉತ್ತರಿಸಿ ದೇವೇಗೌಡರೇ: ಸವಾಲೆಸೆದ ಬಿಎಸ್ ವೈ

0

ಕರ್ನಾಟಕದಲ್ಲಿ ಭಾರಿ ಚರ್ಚೆ ಗ್ರಾಸವಾಗುತ್ತಿರುವುದು ಪ್ರತ್ಯೇಕ ರಾಜ್ಯದ ವಿಷಯ.  ಆ ವಿಷಯವಾಗಿ ರಾಜಕೀಯದಲ್ಲಿ ಕೆಲವೊಂದು ಹೇಳಿಕೆಗಳು ಬಾರಿ ಸಂಚಲವನ್ನುಂಟು ಮಾಡುತ್ತೇವೆ. ಈ ಬಾರಿ ನೇರ  ಹಣಾಹಣಿಗೆ ಇಳಿದು ದೇವೇಗೌಡ ರವರಿಗೆ ಬಹಿರಂಗ ಪ್ರಶ್ನೆಗಳನ್ನು ಹಾಕಿದ್ದಾರೆ. ಅಷ್ಟಕ್ಕು ಆ ಪ್ರಶ್ನೆಗಳು ಯಾವುವು ಮತ್ತು ವಿಷಯದ ಮೂಲವನ್ನು ತಿಳಿಯಲು ಕೆಳಗಡೆ ಓದಿ.

ಇತ್ತೀಚೆಗಷ್ಟೇ ದೇವೇಗೌಡ ರವರು ಪ್ರತ್ಯೇಕ ರಾಜ್ಯದ ವಿಷಯವಾಗಿ ಬಿಎಸ್ ವೈ ರವರ ಮೇಲೆ ಅಧಿಕಾರ ಸಿಗದೆ ಹತಾಶ ಭಾವನೆಯಿಂದ ಪ್ರತ್ಯೇಕ ರಾಜ್ಯದ ಬಗ್ಗೆ ಬಿಎಸ್ ವೈ ರವರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಹು ದೊಡ್ಡ ಆರೋಪವನ್ನು ಮಾಡಿದ್ದರು.ಇದಕ್ಕೆ ಬಿಎಸ್ ವೈ ರವರು ಗರಂ ಆಗಿ ತಕ್ಕ ಪ್ರತ್ಯುತ್ತರ ವನ್ನು ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ ರವರು ನಾನು ಇಲ್ಲಿಯವರೆಗೂ ಯಾವುದೇ ಕಾರಣಕ್ಕಾಗಲಿ ಅವಕಾಶವಾದಿ ರಾಜಕಾರಣ ಮಾಡಿಲ್ಲ ನನ್ನ ಪಕ್ಷವು ಇಂತಹ ಯಾವುದೇ ಕುತಂತ್ರಗಳನ್ನು ಮಾಡಿಲ್ಲ. ಅಂತ ಹತಾಶ ಭಾವನೆ ನಂಬಲಿಲ್ಲ ಜನ ನಮ್ಮನ್ನು ದೊಡ್ಡ ಪಕ್ಷವನ್ನಾಗಿ ಹೊರ ಹೊಮ್ಮಿಸಿದ್ದಾರೆ. ಇದೇ ವೇಳೆ ದೇವೇಗೌಡ ರವರಿಗೆ  ಮೂರು ಪ್ರಶ್ನೆಗಳನ್ನು ಬಿಎಸ್ ವೈ ರವರು ಎಸೆದಿದ್ದಾರೆ.

  1. ಕಳೆದ ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ ರವರು ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಭಾಗಕ್ಕೆ  ಲಿಂಗಾಯತ ಸಿಎಂಗಳ ಕೊಡುಗೆ ಏನು ಎಂದು ಪ್ರಶ್ನಿಸಿದವರು ಯಾರು?
  2. ಚನ್ನಪಟ್ಟಣ ಕ್ಷೇತ್ರದಿಂದ ಜಾತಿಯ ಆಮಿಷಕ್ಕೆ ಬಲಿಯಾಗಿ ಮತ ಹಾಕಿದವರು ಎಂದು ಹೇಳಿಕೆ ನೀಡಿ   ಕೊಪ್ಪಳದ ಜನತೆಗೆ ನನ್ನನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದವರು ಯಾರು?
  3. ಉತ್ತರ ಕರ್ನಾಟಕದ ಭಾಗದಿಂದ ಬರುವ ಆದಾಯವಾದರೂ ಏನು ಎಂದು ಪ್ರಶ್ನಿಸಿದವರು ಯಾರು?

ಈ ನನ್ನ ಪ್ರಶ್ನೆಗಳಿಗೆ ದೇವೇಗೌಡರು ಮೊದಲು ಉತ್ತರ ನೀಡಲಿ ಅಷ್ಟೇ ಅಲ್ಲದೆ ಅಪ್ಪ-ಮಕ್ಕಳ ಬೇಜವಾಬ್ದಾರಿ ಹೇಳಿಕೆಗಳಿಂದ ಪ್ರತ್ಯೇಕ ರಾಜ್ಯದ ಕೂಗು ಹೊತ್ತಿ ಉರಿಯುತ್ತಿದೆ. ಮಗ ಮಾಡಿದ ತಪ್ಪನ್ನು ತಿದ್ದುಕೊಳ್ಳಲು   ಬುದ್ಧಿ ಹೇಳುವುದನ್ನು ಬಿಟ್ಟು ಸುಖಾಸುಮ್ಮನೆ ಆರೋಪಗಳನ್ನು ಮಾಡುವುದು ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.

ಈ ಎಲ್ಲಾ ಪ್ರಶ್ನೆಗಳಿಗೆ ದೇವೇಗೌಡರು ಉತ್ತರ ನೀಡಲಿ ಎಂಬುದು ನಮ್ಮ ಆಶಯ. ರಾಜ್ಯದ ಮುಖ್ಯಮಂತ್ರಿಯಾಗಿ ನನಗೆ ಮತ ನೀಡದವರು ನನ್ನನ್ನು ಕೇಳುವ ನೈತಿಕತೆ ಇಲ್ಲ ಎಂಬ ಹೇಳಿಕೆಗಳನ್ನು ನೀಡಿರುವುದನ್ನು   ನಾವು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು. ಒಮ್ಮೆ ಓದಿ ಶೇರ್ ಮಾಡಿ ಪ್ರತಿಯೊಬ್ಬರಿಗೂ ತಲುಪಿಸಿ