ಬಿಎಸ್ ವೈ ವಿರುದ್ಧ ಕ್ರಿಮಿನಲ್ ಕೇಸು ದಾಖಲು !

ಮಾಜಿ ಸಿಎಂ ಬಿಎಸ್ ವೈ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸುವಂತೆ ಕಲಬುರ್ಗಿ ಕೋರ್ಟ್ ಆದೇಶ ನೀಡಿದೆ.  ಅಷ್ಟಕ್ಕೂ ವಿಷಯದ ಮೂಲವೇನು ಎಂಬುದನ್ನು ತಿಳಿಯಲು ಸಂಪೂರ್ಣ ಓದಿ. ರಾಜಕೀಯ ಜಂಜಾಟದಲ್ಲಿ ಒಬ್ಬರ ವಿರುದ್ಧ ಒಬ್ಬರು ಹೇಳಿಕೆಗಳನ್ನು ನೀಡುವುದು ಸಹಜ ಒಬ್ಬರ ವಿರುದ್ಧ ಒಬ್ಬರು ಹೇಳಿಕೆಗಳನ್ನು ನೀಡುವುದು ಸಹಜ ಅದೇ ಕಂಟಕವಾಗಿದೆ.

ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಅಭಿಮಾನಿಗಳ ಸಂಘದ ರಾಜ್ಯಧ್ಯಕ್ಷರಾದ  ವೀರಣ್ಣ ಕೊರಳ್ಳಿ ರವರು ಕಲಬುರ್ಗಿ ನ್ಯಾಯಾಲಕ್ಕೆ ಕೆಲವು ದಿನಗಳ ಹಿಂದೆ ಬಿ ಎಸ್ ವೈ ರವರು ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರಿಗೆ ಬೆನ್ನಿಗೆ ಚೂರಿ ಹಾಕುವುದು ರಕ್ತಗತವಾಗಿ ಬಂದಿದೆ ಎಂಬ ಮಾತನ್ನು ಬಹಿರಂಗವಾಗಿ ಸಾರ್ವಜನಿಕರ ಮುಂದೆ ಹೇಳಿದ್ದಾರೆ ಎಂದು ಆರೋಪಿಸಿ ಕ್ರಿಮಿನಲ್ ಕೇಸು ದಾಖಲಿಸಲು ಆದೇಶ ನೀಡುವಂತೆ ಮನವಿ ಮಾಡಿದ್ದರು.

ಈ ವಿಚಾರಣೆಗೆ ಅಸ್ತು ಅಂದ ಕಲಬುರ್ಗಿ ನ್ಯಾಯಾಲಯವು ಬಿಎಸ್ ವೈ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲು ಪೋಲಿಸರಿಗೆ ಆದೇಶ ನೀಡಿದೆ.

bsykumara swamy
Comments (0)
Add Comment