ಕ್ರಿಕೆಟ್ ಎಂದಾಗ ನಟಿ ತಾಪ್ಸಿ ಪನ್ನು ಉರಿದುಬಿದ್ದಿದೇಕೆ?

ಕ್ರಿಕೆಟ್ ಎಂದಾಗ ನಟಿ ತಾಪ್ಸಿ ಪನ್ನು ಉರಿದುಬಿದ್ದಿದೇಕೆ?

0

ಭಾರತದೆಲ್ಲೆಡೆ ಕ್ರಿಕೆಟ್ ಎಂದ ತಕ್ಷಣ ಎಲ್ಲರ ಕಿವಿ ನೆಟ್ಟಗಾಗುತ್ತವೆ. ನಿಜ ಹೇಳಬೇಕೆಂದರೆ ಒಂದು ಧರ್ಮಕ್ಕೆ ಇರುವಷ್ಟು ಫಾಲ್ಲೋರ್ಸ್ ಕ್ರಿಕೆಟ್ ಗೆ ಭಾರತದಲ್ಲಿ ಇದ್ದಾರೆ. ಇಡೀ ಭಾರತವೇ ಕ್ರಿಕೆಟ್ ನಲ್ಲಿ ಮುಳುಗಿ ಹೋಗಿದೆ ಎಂದರೆ ಸುಳ್ಳಾಗಲಾರದು.ಆದರೆ ನಟಿ ತಾಪ್ಸಿ ಪನ್ನು ಕ್ರಿಕೆಟ್ ಎಂದಿದೆ ತಕ್ಷಣ ಗರಂ ಆಗಿದ್ದಾರೆ ಕಾರಣ ಕೇಳಿದರೆ ಕೆಲವರು ವಾದ ಮಾಡುತ್ತಿರುವುದು ಸರಿ ಎನಿಸುತ್ತದೆ ಸಂಪೂರ್ಣ ವಿಷಯವನ್ನು ತಿಳಿಯಲು ಕೆಳಗಡೆ ಓದಿ.


ಅಷ್ಟಕ್ಕೂ ತಾಪ್ಸಿ ರವರಿಗೂ ಕ್ರಿಕೆಟ್ ಗೂ ಸಂಬಂಧವೇನು ?ಅವರು ಯಾಕೆ ಮಾತನಾಡಿದ್ದಾರೆ?

ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್ ಅವರ ಬಯೋಪಿಕ್ ನಲ್ಲಿ ನಟಿ ತಾಪ್ಸಿ ಪನ್ನು ರವರು ನಟಿಸಿದ್ದಾರೆ. ಇದೇ ಸಮಯದಲ್ಲಿ ನ್ಯೂಸ್ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ನಟಿ ತಾಪ್ಸಿ ಪನ್ನು ರವರಿಗೆ ಕ್ರಿಕೆಟ್ ನ ಬಗ್ಗೆ ಇರುವ ಅಭಿಪ್ರಾಯದ ಬಗ್ಗೆ ಒಂದು ಪ್ರಶ್ನೆ ಬಂದಿದೆ ಅದಕ್ಕೆ ಉತ್ತರಿಸಿರುವ ತಾಪ್ಸಿ ಪನ್ನು ರವರು ಕೆಳಗಿನ ಕಾರಣಗಳನ್ನು ನೀಡಿ ನನಗೆ ಕ್ರಿಕೆಟ್ ಅಂದರೆ ಇಷ್ಟವಿಲ್ಲ ಎಂಬ ಮಾತನ್ನು ಆಡಿದ್ದಾರೆ.


ಕೆಲವು ವರ್ಷಗಳ ಹಿಂದೆ ಭಾರತ ತಂಡದ ಹಾಕಿ ನಾಯಕರಾದ ಸಂದೀಪ್ ಸಿಂಗ್ ರವರು ರೈಲು ಪ್ರಯಾಣದ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು, ನೀನು ಸಂದೀಪ್ ರವರ ಕಥೆ ಮುಗಿಯಿತು ಎಂದು ಎಲ್ಲರೂ ಅಂದುಕೊಂಡಿದ್ದಾಗ ಸಂದೀಪ್ ರವರು ಮತ್ತೆ ಭಾರತ ತಂಡದಲ್ಲಿ ಸೇರಿಕೊಂಡು ಇತಿಹಾಸ ರಚಿಸುವಂತಹ ಸಾಧನೆಗಳನ್ನು ಮಾಡಿದರು.

ಈ ವಿಷಯ ನನಗೆ ಸಿನಿಮಾ ಕಥೆ ಕೇಳಿ ತಿಳಿಯಿತು.ಇಂತಹ ಅದೆಷ್ಟೋ ಘಟನೆಗಳು ಭಾರತದಲ್ಲಿನ ಕ್ರಿಕೆಟ್ ಅಬ್ಬರದಿಂದಾಗಿ ಭಾರತದಲ್ಲಿನ ಕ್ರಿಕೆಟ್ ಅಬ್ಬರದಿಂದಾಗಿ ಅಷ್ಟೇ ಅಲ್ಲದೆ ಭಾರತದಲ್ಲಿ ನಿಜವಾದ ಪ್ರತಿಭೆಗಳು ಬೆಳಕಿಗೆ ಬರುವ ಮುನ್ನವೇ ಮುದುಡಿ ಹೋಗುತ್ತಿದ್ದಾರೆ ಇದಕ್ಕೆ ಕಾರಣ ಕ್ರಿಕೆಟ್ ಎಂಬ ಆರೋಪವನ್ನು ಮಾಡಿದ್ದಾರೆ.