ಬ್ರೇಕಿಂಗ್: ಆದೇಶದ ಬಳಿಕ ಉಗ್ರರ ದಮನಕ್ಕೆ ಮುಂದಾದ ಸೇನೆ !

ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ರಮ್ಜಾನ್ ಬಳಿಕದಲ್ಲಿ ಪುನರಾರಂಭಿಸಿರುವ ಭಾರತೀಯ ಪಡೆಗಳು ಇಂದು ಸೋಮವಾರ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿವೆ.ಉಗ್ರರ ವಿರುದ್ಧದ ಎನ್ಕೌಂಟರ್ ಈ ಹೊತ್ತಿನಲ್ಲೂ ನಡೆಯುತ್ತಿದೆ ಎಂದು ತಾಜಾ ವರದಿಗಳು ತಿಳಿಸಿವೆ.

ಕಳೆದ ಜೂನ್ 14ರಂದು ಜಮ್ಮು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ನಡೆದಿದ್ದ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಹತರಾಗಿ ಓರ್ವ ಯೋಧ ಹುತಾತ್ಮರಾಗಿದ್ದರು.

ಅದೇ ದಿನ ಸರಕಾರ ರಮ್ಜಾನ್ ಮುಗಿದ ಪ್ರಯಕ್ತ ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಪುನರಾರಂಭಿಸಲು ನಿರ್ಧರಿಸಿತ್ತು.

Indian army
Comments (0)
Add Comment