ಸಿಎಂ ರವರೇ ಇದಕ್ಕೆ ಉತ್ತರ ಕೊಡಿ ಮುನಿಸ್ವಾಮಿರವರು ಅವರ ಅಭಿಪ್ರಾಯ ತಿಳಿಸಿದ್ದೆ ತಪ್ಪಾ? ಮರಿಸ್ವಾಮಿ ಮೇಲೆ ಮುಗಿಬಿದ್ದ ಸಿಎಂ ಬೆಂಬಲಿಗರು

ಸಿಎಂ ರವರೇ ಇದಕ್ಕೆ ಉತ್ತರ ಕೊಡಿ ಮುನಿಸ್ವಾಮಿರವರು ಅವರ ಅಭಿಪ್ರಾಯ ತಿಳಿಸಿದ್ದೆ ತಪ್ಪಾ? ಮರಿಸ್ವಾಮಿ ಮೇಲೆ ಮುಗಿಬಿದ್ದ ಸಿಎಂ ಬೆಂಬಲಿಗರು

0

ಪ್ರಕರಣ ಒಮ್ಮೆ ಓದಿ – – ಬೀದಿಯಲ್ಲಿ ಜಟಾಪಟಿ: ಸಿಎಂ ವಿರುದ್ದ ಆಪ್ತನ ಸಿಟ್ಟು ಓದಿ ಒಮ್ಮೆ ಸಿಎಂರವರ ವ್ಯಥೆ

ಮೈಸೂರು: ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಿದ್ದಕ್ಕೆ ಪಬ್ಲಿಕ್ ಟಿವಿಯ ಸಂದರ್ಶನ ಕಾರ್ಯಕ್ರಮದಲ್ಲಿ ಮರಿಸ್ವಾಮಿ ಮೇಲೆ ಸಿಎಂ ಬೆಂಬಲಿಗರು ಮುಗಿಬಿದ್ದಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಹಳೆಕೆಸರೆ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಗ್ರಾಮ ಪಂಚಾಯಿತಿಯ ಜೆಡಿಎಸ್ ಸದಸ್ಯ ಮರಿಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಮಾತಿನ ಜಟಾಪಟಿ ನಡೆಯಿತು.

ಒಂದು ಕಾಲದಲ್ಲಿ ಸಿಎಂ ಅವರ ಆಪ್ತನಾಗಿದ್ದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಮರಿಸ್ವಾಮಿ ಅವರ ಜೊತೆ ಮಧ್ಯಾಹ್ನ ಸಂದರ್ಶನ ನಡೆಸುತಿತ್ತು. ಈ ವೇಳೆ ಸಂದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಸಿಎಂ ಬೆಂಬಲಿಗರು ದರ್ಬಾರ್ ನಡೆಸಿದ್ದಾರೆ. ಕಿವಿಗೆ ಹಾಕಿದ್ದ ಇಯರ್ ಫೋನ್ ಕಿತ್ತಾಕಿ ಸಂದರ್ಶನಕ್ಕೆ ಅಡ್ಡಿ ಪಡಿಸಿದ್ದಾರೆ.

ಪಬ್ಲಿಕ್ ಟಿವಿಯ ಮೈಕ್ ಕೂಡ ಕಿತ್ತೆಸೆದ ಬೆಂಬಲಿಗರು ಸಂದರ್ಶನ ನೀಡುತ್ತಿದ್ದ ಮರಿಸ್ವಾಮಿಯನ್ನು ಕರೆದೊಯ್ದಿದ್ದಾರೆ.

ಕೃಪೆ: ಪಬ್ಲಿಕ್ ಟಿವಿ