ಸುಳ್ಳು ಬೋಧನೆ;ಹಿಂದೂಗಳು ಕ್ರೂರಿಗಳು.!! ಹೀಗೆ ಯಾವ ದೇಶದ ಪಠ್ಯದಲ್ಲಿ ಬೋಧಿಸುತ್ತಾರೆ ಗೊತ್ತಾ..??!

0

ಭಾರತದ ವಿರುದ್ಧ ಸದಾ ದ್ವೇಷಕಾರುವ ಅಂಶಗಳನ್ನೇ ಶಾಲಾಮಕ್ಕಳಿಗೆ ಬೋಧಿಸುತ್ತಿರುವ ಪಾಕಿಸ್ಥಾನ ಇದೀಗ,ಪಾಕಿಸ್ತಾನದ ಪಠ್ಯದಲ್ಲಿ ಹಿಂದೂಗಳನ್ನು ಕೊಲೆಗಡುಕರು ಎಂದು ಕರೆದಿದೆ. ಇದಲ್ಲದೇ ದೇಶ ವಿಭಜನೆಯಾಗಲು ಹಿಂದುಗಳು ಕಾರಣ ಎಂದು ಆರೋಪವನ್ನೂ ಹಿಂದೂಗಳ ಮೇಲೆ ಮಾಡಲಾಗಿಲಾಗಿದೆ.

ದೇಶ ವಿಭಜನೆ ಬಗ್ಗೆ ಭಾರತ ಶಾಲಾ ಪಠ್ಯದಲ್ಲಿ ಒಂದು ರೀತಿ ಬೋಧಿಸಿದರೆ, ಪಾಕಿಸ್ಥಾನದ ಪಠ್ಯ ಸಂಪೂರ್ಣ ಭಿನ್ನ. ಇದು ಭಾರತ ವಿರುದ್ಧ ದ್ವೇಷ ಕಾರುವುದಕ್ಕೆ ಸೀಮಿತವಾಗಿದೆ. ಶಾಲಾ ಮಕ್ಕಳ ಮನಸ್ಸಿನ ಮೇಲೆ ಇದು ಪರಿಣಾಮ ಬೀರುತ್ತಿದ್ದು, ಎರಡೂ ದೇಶಗಳ ಮಧ್ಯೆ ಸಾಮರಸ್ಯ ಮೂಡಿಸುವ ಯತ್ನಕ್ಕೆ ತೀವ್ರ ಹಿನ್ನಡೆಯಾಗುತ್ತದೆ ಅಲ್ಲದೇ ಸೇಡಿನ ಮನೋಭಾವನೆ ಬಿತ್ತುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

70 ವರ್ಷಗಳ ಹಿಂದೆ ದೇಶ ವಿಭಜನೆ ವೇಳೆ ಹಿಂದೂಗಳು ಪಾಕ್‌ನಿಂದ ಭಾರತಕ್ಕೆ, ಭಾರತದಿಂದ ಮುಸ್ಲಿಮರು ಪಾಕ್‌ಗೆ ವಲಸೆ ಹೋಗಿದ್ದಾರೆ. ಇದು ಶತಮಾನದ ಅತಿ ದೊಡ್ಡ ವಲಸೆ ಎಂದು ಗುರುತಿಸಿಕೊಂಡಿದೆ. ಈ ವೇಳೆ ತೀವ್ರ ಹಿಂಸಾಚಾರ ಸಂಭವಿಸಿದ್ದು,ಎಣಿಕೆಗೆ ಬರದಷ್ಟು ಸಾವುನೋವುಗಳಾಗಿವೆ. ದೇಶ ವಿಭಜನೆಗೆ ರಾಜಕೀಯ ಕಾರಣವನ್ನು ಬರೆದೇ ಇಲ್ಲ.

ಇತಿಹಾಸವನ್ನು ಸಂಪೂರ್ಣ ತಿರುಚಿ ಬರೆಯಲಾಗಿದೆ. ಈ ಘಟನೆಯನ್ನು ಪಾಕ್‌ ಪಠ್ಯದಲ್ಲಿ ‘ಹಿಂದೂಗಳು ಮುಸ್ಲಿಮರನ್ನು ಹತ್ಯೆಗೈದರು, ಆಸ್ತಿ ಪಾಸ್ತಿ ನಾಶ ಮಾಡಿದರು, ಭಾರತದಿಂದ ಬಲವಂತವಾಗಿ ಮುಸ್ಲಿಮರನ್ನು ಹೊರದೂಡಿದರು’ ಎಂದು ಬರೆಯಲಾಗಿದೆ. ಅಲ್ಲದೇ ಮುಸ್ಲಿಮರನ್ನು ಹೀನಾಯವಾಗಿ ನೋಡಿದ್ದರಿಂದಲೇ, ನಾವು ಪಾಕ್‌ ಅನ್ನು ರಚಿಸಿದೆವು ಎಂದು ಬರೆಯಲಾಗಿದೆ.

ಕೃಪೆ: ಸಂಗ್ರಹ ಮಾಹಿತಿ