ಕಾಗದ,ಪೆನ್ನು ನಿಷೇಧಿಸಲಾಗಿದ್ದರೂ,ಜೈಲಿನ ಗೋಡೆಗಳ ಮೇಲೆ ಮೊಳೆಯಿಂದಲೇ ಹತ್ತು ಸಾವಿರ ಸಾಲುಗಳ ಕಾವ್ಯ ರಚಿಸಿದ್ರು ಮಹಾನ್ ದೇಶಾಭಿಮಾನಿ ವೀರ ಸಾವರ್ಕರ್!!

ಕಾಗದ,ಪೆನ್ನು ನಿಷೇಧಿಸಲಾಗಿದ್ದರೂ,ಜೈಲಿನ ಗೋಡೆಗಳ ಮೇಲೆ ಮೊಳೆಯಿಂದಲೇ ಹತ್ತು ಸಾವಿರ ಸಾಲುಗಳ ಕಾವ್ಯ ರಚಿಸಿದ್ರು ಮಹಾನ್ ದೇಶಾಭಿಮಾನಿ ವೀರ ಸಾವರ್ಕರ್!!

0

1.ದೇಶಭಕ್ತಿಯ ಅಪರಾಧ’ಕ್ಕಾಗಿ ಭಾರತೀಯ ಮಾಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಪ್ರಪ್ರಥಮ ವಿದ್ಯಾರ್ಥಿ.

2.ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿ ಇಟ್ಟು ಹೋಳಿ ಆಚರಿಸಿದ ಪ್ರಪ್ರಥಮ ಸ್ವದೇಶಾಭಿಮಾನಿ.

3.‘ಸ್ವರಾಜ್ಯ’ ಎಂದು ಹೇಳುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ ಸಂಪೂರ್ಣ ಸ್ವರಾಜ್ಯವೇ ಭಾರತದ ಲಕ್ಷ್ಯ ಎಂದು ಹೇಳಿದ ಪ್ರಪ್ರಥಮ ದೇಶಾಭಿಮಾನಿ.

4.ದಾಸ್ಯ ರಕ್ಕಸನ ಎದೆ ಮೆಟ್ಟಲು ಪ್ರಯತ್ನಿಸಿದ್ದಕ್ಕಾಗಿ ತಾನು ಗಳಿಸಿದ ಬಿ.ಎ. ಪದವಿಯನ್ನು ಕಳೆದುಕೊಂಡ ಪ್ರಪ್ರಥಮ ಭಾರತೀಯ ವಿದ್ಯಾರ್ಥಿ.

5.ಕ್ರಾಂತಿಕಾರಿ ಚಟುವಟಿಕೆಗೆ ತೊಡಗಿದ್ದಕ್ಕಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸಲ್ಪಟ್ಟ ಮೊಟ್ಟಮೊದಲ ಬ್ಯಾರಿಸ್ಟರ್. ಹಿಂದುಸ್ಥಾನದ ಸ್ವಾತಂತ್ರ್ಯದ ಪ್ರಶ್ನೆ ವಿದೇಶಗಳಲ್ಲೂ ಮಹತ್ವಗಳಿಸುವಂತೆ ಮಾಡಿದ ಪ್ರಪ್ರಥಮ ಭಾರತೀಯ.

6.ಪ್ರಕಟನೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ (೧೮೫೭ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ಬರೆದದ್ದು ೨೪ರ ಹರೆಯದಲ್ಲಿ) ರಚಿಸಿದ ಜಗತ್ತಿನ ಪ್ರಪ್ರಥಮ ಲೇಖಕ.

7..ಬ್ರಿಟಿಷರ ನ್ಯಾಯಾಲಯವನ್ನು ತಾವು ಪುರಸ್ಕರಿಸುವುದಿಲ್ಲವೆಂದು ಸಾರಿದ ಪ್ರಪ್ರಥಮರು.

8.ಜಗತ್ತಿನ ರಾಜಕೀಯ ಇತಿಹಾಸದಲ್ಲಿಯೇ ಹೇಗ್ ಅಂತರ್‌ರಾಷ್ಟ್ರೀಯ ನ್ಯಾಯಾಲಯದೆದುರು ತಮ್ಮ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಪ್ರಪ್ರಥಮರು.

9.ವಿಶ್ವ ರಾಜಕೀಯ ಇತಿಹಾಸದಲ್ಲಿ ೫೦ ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಪ್ರಪ್ರಥಮರು.


10.ಬರೆಯಲು ಬೇಕಾದ ಕಾಗದ, ಪೆನ್ನು ಇತ್ಯಾದಿ ಸೌಲಭ್ಯಗಳೊಂದೂ ಇಲ್ಲದಿದ್ದರೂಬರವಣಿಗೆಯನ್ನು ನಿಷೇಧಿಸಲಾಗಿದ್ದರೂ, ಜೈಲಿನ ಗೋಡೆಗಳ ಮೇಲೆ ಮೊಳೆಯಿಂದಲೇ ೧೦ ಸಾವಿರ ಸಾಲುಗಳ ಕಾವ್ಯ ರಚಿಸಿ ಕಂಠಪಾಠ ಮಾಡಿ, ೧೪ ವರ್ಷಗಳ ಸೆರೆವಾಸದಿಂದ ಸುರಕ್ಷಿತವಾಗಿ ಹೊರಗೆ ಬಂದ ನಂತರ ಮತ್ತೆ ಅದನ್ನು ಬರೆದು ದೇಶಕ್ಕೆ ಅರ್ಪಿಸಿದ ವಿಶ್ವದ ಪ್ರಪ್ರಥಮ ಮಹಾಕವಿ.

ಆಧಾರ :‘ಅಸೀಮಾ’ ಕನ್ನಡ ಮಾಸಿಕ.