ವೈರಲ್: ಸಿದ್ದರಾಮಯ್ಯ ಸರ್ಕಾರದ ಮೇಲೆ ಹಿಂದು ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆ ಟ್ವೀಟಾಸ್ತ್ರ ..!!

ಅನಂತಕುಮಾರ್ ಹೆಗಡೆ, ಸದ್ಯ ಕರ್ನಾಟಕ ರಾಜಕಾರಣದಲ್ಲಷ್ಟೇ ಅಲ್ಲ ಇಡೀ ಭಾರತದಾದ್ಯಂತ ಸೆಕ್ಯೂಲರ್ ಗಳ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ. ಅನಂತಕುಮಾರ್ ಹೆಗಡೆಯೆಂದರೆ ಕರ್ನಾಟಕದ ಕಾಂಗ್ರೆಸ್ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ನಡುಕ ಹುಟ್ಟಿದೆ.

ಅನಂತಕುಮಾರ್ ಹೆಗಡೆಯವರು ತಮ್ಮ ಹರಿತವಾದ, ಹಿಂದುತ್ವದ ಭಾಷಣಗಳಿಂದಲೇ ರಾಜ್ಯದಲ್ಲಿ ಚಿರಪರಿಚಿತ. ಆದರೆ ವಿರೋಧಿಗಳ ಕಣ್ಣಿಗೆ ಅನಂತಕುಮಾರ್ ಹೆಗಡೆ ಮಾತ್ರ ವಿಲನ್ ಆಗಿ ಕಾಣುತ್ತಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಹಾಗೂ ಅವರ ಸಂಪುಟದ ಮಂತ್ರಿಗಳು ನಡೆಸುತ್ತಿರುವ ಗೂಂಡಾಗಿರಿ ಆಡಳಿತದ ಬಗ್ಗೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ವಿಫಲರಾಗಿರುವ ಸಿದ್ದರಾಮಯ್ಯ ಅವರ ಸರ್ಕಾರದ ವಿರುದ್ಧ ಅನಂತ ಕುಮಾರ್ ಹೆಗಡೆಯವರು ಮಾಡಿರುವ ಟ್ವೀಟ್ ವೈರಲ್ ಆಗಿದೆ.

“ನಲಪಾಡ್ ಗೂಂಡಾಗಿರಿ, ಪೆಟ್ರೋಲ್ ನಾರಾಯಣಸ್ವಾಮಿ, ದಾದಾಗಿರಿ , ನೈಸ್ ಖೇಣಿ ಪಕ್ಷಕ್ಕೆ ಸೇರ್ಪಡೆ, ಲೋಕಾಯುಕ್ತರಿಗೆ ಚೂರಿ ಇರಿತ.ಸೆಲ್ಫ್ ಗೋಲ್ ಬಾರಿಸುವುದು ಇದೇನೇ” ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಸಿದ್ದರಾಮಯ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Comments (0)
Add Comment