​ಇವರ ಬಳಿ ಒಂದು ಲಕ್ಷ ರೂಪಾಯಿ ಕೂಡ ಇಲ್ಲ.. ಇವರೊಬ್ಬ ರಾಜಕಾರಣಿಯೆ..?? 

​ಇವರ ಬಳಿ ಒಂದು ಲಕ್ಷ ರೂಪಾಯಿ ಕೂಡ ಇಲ್ಲ.. ಇವರೊಬ್ಬ ರಾಜಕಾರಣಿಯೆ..?? 

0

ಹೌದು ರಾಜಕಾರಣಿಗಳು ಎಂದರೆ ಬಂಗಲೆ, ಕಾರು, ಮನೆ, ಲೆಕ್ಕವಿಲ್ಲದಷ್ಟು ಹಣ ಇದು ನಮ್ಮ ಭಾರತದ ರಾಜಕಾರಣಿಗಳ ಲಕ್ಷಣ ಹೌದಲವೇ.?


ದೇಶ ಸೇವೆ ಮರೆತು ಬರಿ ತಮ್ಮಕುಟುಂಬದ ಏಳಿಗೆಗೆ ಶ್ರಮಿಸುವ ರಾಜಕಾರಣಿಗಳೇ ಹೆಚ್ಚು.


ಆದರೆ ಇರವವರಲ್ಲಿ ಕೆಲವು ಪ್ರಾಮಾಣಿಕ ರಾಜಕಾರಣಿಗಳನ್ನು ನಾವು ಕಂಡಿದ್ದೆವೆ ಅಂತಹ ಒಬ್ಬ ರಾಜಕಾರಣಿ ಬಗ್ಗೆ ನಾವು ನಿಮಗೆ ಹೇಳಲು ಹೊರಟಿದ್ದೇವೆ..!! ಮುಂದೆ ಓದಿ…

ಅಷ್ಟಕು ಯಾರು ಆ ಪ್ರಾಮಾಣಿಕ ರಾಜಕಾರಣಿ ..!!


ಹೌದು!!ಮುಖ್ಯಮಂತ್ರಿ ಹುದ್ದೆ ಅಲಂಕರಿಸಿ, ಕೆಳಗಿಳಿಯುತ್ತಿದ್ದಂತೆ ಕೆಲ ರಾಜಕಾರಣಿಗಳ ಆಸ್ತಿ ರಾಕೆಟ್‌’ನಂತೆ ಏರಿಕೆಯಾಗುವ ಸಾಕಷ್ಟು ಉದಾಹರಣೆಗಳನ್ನು ಈ ದೇಶ ಕಂಡಿದೆ. ಆದರೆ ತ್ರಿಪುರದಲ್ಲಿ 20 ವರ್ಷಗಳಿಂದ ನಿರಂತರವಾಗಿ ಮುಖ್ಯಮಂತ್ರಿಯಾಗಿರುವ ಮಾಣಿಕ್ ಸರ್ಕಾರ್ ಇದಕ್ಕೆ ಅಪವಾದ.


ಅವರು ಹೊಂದಿರುವ ಒಟ್ಟಾರೆ ಆಸ್ತಿಯೇ ಕೇವಲ 4000 ರು.! ಅವರ ಬಳಿ ಒಂದು ಮೊಬೈಲ್ ಫೋನ್ ಕೂಡ ಇಲ್ಲ!! ನಂಬಲು ಅಚ್ಚರಿಯಾದರೂ ಇದು ನಿಜ.


ಮಾಣಿಕ್ ಸರ್ಕಾರ್ ಅವರಿಗೆ ‘ದೇಶದಲ್ಲೇ ಅತ್ಯಂತ ಬಡ ಸಿಎಂ’ ಎಂಬ ಅಭಿದಾನ ಸಿಕ್ಕಿ ಸಾಕಷ್ಟು  ವರ್ಷಗಳೇ ಉರುಳಿವೆ. ಅವರ ಬಡತನ ಈ ಬಾರಿ ಮತ್ತಷ್ಟು ಹೆಚ್ಚಾಗಿದೆ. ತ್ರಿಪುರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಧಾನ್‌ಪುರ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಮಾಣಿಕ್ ಸರ್ಕಾರ್, ಅದರ ಜತೆಗೆ ತಮ್ಮ ಆಸ್ತಿ ವಿವರ ಘೋಷಣೆ ಮಾಡಿಕೊಂಡಿದ್ದಾರೆ. ಕೈಯಲ್ಲಿ 1520 ರೂ. ನಗದು ಇದೆ.

ಬ್ಯಾಂಕ್ ಖಾತೆಯಲ್ಲಿ ಜ.20 ಕ್ಕೆ ಅನ್ವಯವಾಗುವಂತೆ 2410.16 ರು. ಇದೆ. ಅಗರ್ತಲದಲ್ಲಿ ಸೋದರರೊಂದಿಗೆ ಜಂಟಿ ಒಡೆತನ ಹೊಂದಿರುವ 0,0, 118  ಎಕರೆ ಪಿತ್ರಾರ್ಜಿತ ಆಸ್ತಿ ಇದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಚುನಾವಣೆ ವೇಳೆ ಅವರ ಖಾತೆಯಲ್ಲಿ 9720.38 ರೂ ಇತ್ತು.

ಏಕೆ ಹೀಗೆ?

ಸಿಎಂ ಸರ್ಕಾರ್‌ಗೆ ಸರ್ಕಾರದಿಂದ ವೇತನ ಸಿಗುತ್ತದೆ. ಆದರೆ ಸಿಪಿಎಂನ ಸಂಪ್ರದಾಯದಂತೆ ಅವರು ಅದನ್ನು ಪಕ್ಷಕ್ಕೆ ದೇಣಿಗೆ ಕೊಡುತ್ತಾರೆ. ಪ್ರತಿಯಾಗಿ ಜೀವನ ನಿರ್ವಹಣೆಗೆಂದು ಸಿಪಿಎಂ ಪಕ್ಷ ಸರ್ಕಾರ್ ಅವರಿಗೆ ಮಾಸಿಕ 10 ಸಾವಿರ ರೂ. ನೀಡುತ್ತದೆ.

ಅದರಲ್ಲೇ ಅವರು ಸರಳ ಜೀವನ ಮಾಡುತ್ತಾರೆ. ಮಾಣಿಕ್‌ರ ಪತ್ನಿ ನಿವೃತ್ತ ಸರ್ಕಾರಿ ನೌಕರೆ.ಇಂತಹ ಪ್ರಾಮಾಣಿಕ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ರಾಜಕೀಯಕ್ಕೆ ಬರಲಿ ಎಂದು ಆಶಿಸೊಣ..