ನಾನು ನಿಮಗೆ ಮತ ಹಾಕುವುದಿಲ್ಲ..!!ಕುರುಬ ಸಮುದಾಯದ ಯುವಕನಿಂದ ಸಿಎಂಗೆ ಬಹಿರಂಗ ಪತ್ರ..

ನಾನು ನಿಮಗೆ ಮತ ಹಾಕುವುದಿಲ್ಲ..!!ಕುರುಬ ಸಮುದಾಯದ ಯುವಕನಿಂದ ಸಿಎಂಗೆ ಬಹಿರಂಗ ಪತ್ರ..

0

ನಮಸ್ಕಾರ ಸಿದ್ದರಾಮಯ್ಯನವರೇ,

ನಾನು ನಿಮ್ಮ ಸಮುದಾಯದ ಯುವಕ. ನನ್ನ ತಂದೆಯವರ ಕಾಲದಿಂದಲೂ ನಿಮ್ಮನ್ನು ಬೆಂಬಲಿಸಿಕೊಂಡು ಬಂದಿದ್ದೆವೆ. ನೀವು ಪಕ್ಷೇತರ, ಜನತಾ ದಳ, ಜೆಡಿ(ಎಸ್) , ಹಾಲಿ ಕಾಂಗ್ರೇಸ್ ಹೀಗೆ ಯಾವ ಪಕ್ಷದಿಂದರೂ ಸ್ಪರ್ಧಿಸಿದರೂ ನಮ್ಮ ಕುಟುಂಬ ನಿಮಗೆ ಮತ ಹಾಕಿತ್ತು. ಕಾರಣ ನೀವೋಬ್ಬ ನಮ್ಮ ಸಮುದಾಯಕ್ಕೆ ಸೇರಿದವರು ಅನ್ನುವ ಒಂದೇ ಕಾರಣಕ್ಕೆ..

ಆದರೇ, ಇನ್ನು ಮುಂದೆ ನಿಮ್ಮನ್ನು ಏಕೆ ಬೆಂಬಲಿಸಬೇಕು ಅನ್ನುವ ಪ್ರಶ್ನೆ ನನ್ನನ್ನು ಹಾಗೂ ನಮ್ಮ ಕುಟುಂಬವನ್ನು ಗಾಢವಾಗಿ ಕಾಣುತ್ತಿದೆ..

1.ಕುರುಬರ ನಾಯಕನೆಂಬ ಕಾರಣಕ್ಕೆ ಬೆಂಬಲಿಸೋಣವೆಂದರೇ…??

ಒಬ್ಬನೇ ಒಬ್ಬ ಕುರುಬ ನಾಯಕನನ್ನು ಬೆಳೆಸಲಿಲ್ಲ. ನಿಮ್ಮನ್ನು ಕಾಂಗ್ರೇಸ್ ಗೆ ಕರೆತಂದ ಹೆಚ್.ವಿಶ್ವನಾಥ್ ರನ್ನೇ ಮುಳುಗಿಸಿದಿರಿ. ನಿಮ್ಮ ಮಗ ಮಾತ್ರ ನಿಮಗೆ ಕುರುಬನ ಥರ ಕಾಣುತ್ತಾನೆ. ನನ್ನ ಸಹೋದರರು ಬಾಗಲಕೋಟೆಯಲ್ಲಿ ನೀವೇ ಹಬ್ಬಿಸಿಬಿಟ್ಟಿದ ಒಳಮೀಸಲಾತಿ ಬಗ್ಗೆ ಕೇಳಿದರೆ ಮೈಸೂರು ಶೈಲಿಯ ಬೈಗುಳ ಬೈದಿರಿ.

2. ಅಭಿವೃದ್ಧಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು, ನಿಮ್ಮನ್ನು ಬೆಂಬಲಿಸೋಣವೆಂದರೇ…???

ನಿಮ್ಮ ಅಧಿಕಾರವಧಿಯಲ್ಲಿ , ಅಭಿವೃದ್ಧಿಗಿಂತ ಹಗರಣಗಳೇ ಜಾಸ್ತಿ. ಸಾಲದ್ದಕ್ಕೆ ಅದನ್ನ ಮುಚ್ಚಿ ಹಾಕಲು ಲೋಕಾಯುಕ್ತವನ್ನೇ ಮುಚ್ಚಿದಿರಿ. ಯಕಶ್ಚಿತ್ ರಸ್ತೆಯ ಗುಂಡಿಗಳನ್ನು ಮುಚ್ಚಲಾಗದೇ ನೂರಾರು ಬಲಿ ತೆಗೆದುಕೊಂಡಿರಿ..

3.ರೈತರ ಹಿತದೃಷ್ಟಿಯಿಂದ ನಿಮ್ಮನ್ನು ಬೆಂಬಲಿಸೋಣವೆಂದರೇ…??

ನಿಮ್ಮ ಅಧಿಕಾರವಧಿಯಲ್ಲಿ ಕರ್ನಾಟಕದ ಇತಿಹಾಸದಲ್ಲಿಯೇ ಕಂಡು ಕೇಳರಿಯದಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡರು. ಅದನ್ನು ತಡೆಯುವ ಬದಲು ಇನ್ನು ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರಿಗೆ ಐದು ಲಕ್ಷ ಪರಿಹಾರ ನೀಡಲಾಗುವುದೆಂದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೆಪಿಸಿದ ಜಗತ್ತಿನ ಮೊದಲ ಮುಖ್ಯಮಂತ್ರಿ ನೀವು..

4.ನಾಡು-ನುಡಿಗಾಗಿ ನಿಮ್ಮನ್ನು ಬೆಂಬಲಿಸೋಣವೆಂದರೇ…?

ಸಂಪೂರ್ಣ ಬಹುಮತದ ಸರ್ಕಾರವಿದ್ದರೂ, ನಿಮ್ಮ ಕೈಲಿ ಒಂದೇ ಒಂದು ವಿಶ್ವ ಕನ್ನಡ ಸಮ್ಮೇಳನ ನಡೆಸಲು ಆಗಲಿಲ್ಲ. ಕನ್ನಡಕ್ಕಾಗಿ ಹೋರಾಡುವವರನ್ನು ಕಾಸು ಕೊಟ್ಟು ಖರೀದಿಸಿದಿರಿ. ರಾಷ್ಟ್ರೀಯ, ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಗಲೊತ್ತಿನಲ್ಲಿಯೇ ವೇದಿಕೆ ಮೇಲೆ ನಿದ್ದೆ ಮಾಡಿ ಕರ್ನಾಟಕದ ಮಾನ-ಮರ್ಯಾದೆ ತೆಗೆದಿರಿ.

5.ಕಾವೇರಿ-ಮಹಾದಾಯಿಗಾಗಿ ನಿಮ್ಮನ್ನು ಬೆಂಬಲಿಸೋಣವೆಂದರೇ…?

ಗೋವಾದಿಂದ ಕರ್ನಾಟಕಕ್ಕೆ ಒಂದು ಹನಿ ನೀರನ್ನು ಬಿಡುವುದಿಲ್ಲ ಎಂದು ಹೇಳಿದ ಸೋನಿಯಾ ಗಾಂಧಿಯ ಪಕ್ಷದವರು ನೀವು. ಕಾವೇರಿಯ KRS ಅಣೆಕಟ್ಟನ್ನು ಕಟ್ಟಿದ ರಾಜರನ್ನ ಎಕವಚನದಲ್ಲಿ ಸಂಭೋದಿಸಿದ ದುರಹಂಕಾರಿ ನೀವು..

6.ಉದ್ಯೋಗಕ್ಕಾಗಿ ನಿಮ್ಮನ್ನು ಬೆಂಬಲಿಸೋಣವೆಂದರೇ…?

ಈ ಐದು ವರ್ಷಗಳಲ್ಲಿ ಉದ್ಯೋಗಕ್ಕಿಂತ ಕಮೀಷನ್ ಲಾಭಿಯೇ ಜಾಸ್ತಿ. ಇಂದಿರಾ ಕ್ಯಾಂಟೀನ್ ನಲ್ಲಿ ಸಹ ಕಮಿಷನ್ ಹಾವಳಿ.

7.ದೀನ-ದಲಿತರ ಉದ್ಧಾರಕ್ಕಾಗಿ ನಿಮ್ಮನ್ನು ಬೆಂಬಲಿಸೋಣವೆಂದರೇ..?

ದಲಿತರ ಕಲ್ಯಾಣಕ್ಕೆ ಏನನ್ನೂ ಮಾಡಲಿಲ್ಲ. ದಲಿತ ಮಕ್ಕಳ ಹಾಸಿಗೆ – ದಿಂಬಿನಲ್ಲಿ ಕಮೀಷನ್ ಹೊಡೆದವರನ್ನ ಮಂತ್ರಿ ಮಾಡಿ ಪಕ್ಕದಲ್ಲಿ ಕೂರಿಸಿಕೊಂಡಿರಿ. ಹಿರಿಯ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ರವರನ್ನು ಚೆನ್ನಾಗಿ ಬಳಸಿಕೊಂಡು ನಂತರ ಕನಿಷ್ಟ ಸೌಜನ್ಯವೂ ತೋರದೇ ಬೀಸಾಡಿದಿರಿ.

8.ಹಿಂದೂಗಳಿಗಾಗಿ ನಿಮ್ಮನ್ನು ಬೆಂಬಲಿಸೋಣವೆಂದರೇ…??

ನಿಮ್ಮ ಅಧಿಕಾರವಧಿಯಲ್ಲಿ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಹಿಂದೂ ಅಮಾಯಕ ಯುವಕರು ಹತ್ಯೆಗೀಡಾದರು. ಇಂತಹವರೇ ಹತ್ಯೆ ಮಾಡಿದ್ದಾರೆಂದೂ ತಿಳಿದರೂ ಅವರ ಧರ್ಮದ ಹೆಸರು ಹೇಳಲು ನಿಮ್ಮ ನಾಲಿಗೆ ತಡವರಿಸಿತು. ಸಾಲದ್ದಕ್ಕೆ ಅಮಾಯಕ ಮುಗ್ದ ಹಿಂದೂಗಳನ್ನು ಹತ್ಯೆ ಮಾಡಿದವರ ಮೇಲಿನ ಕೇಸ್ ಗಳನ್ನು ವಾಪಾಸ್ ಪಡೆಯುತ್ತಿದ್ದಿರಿ. ಗಣೇಶನ ಹಬ್ಬಕ್ಕೆ ಮೈಕು ಹಾಕಿದರೇ ಅದು ಶಬ್ದ ಮಾಲಿನ್ಯ ಅಂದವರು ನೀವು…

9.ಕೊನೆಯದಾಗಿ, ದಕ್ಷ ಆಡಳಿತ ಕೊಟ್ಟಿದ್ದಿರೆಂದು ಬೆಂಬಲಿಸೋಣವೆಂದರೇ…?

ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲು ದಕ್ಷ ಅಧಿಕಾರಿಗಳು ಅನುಮಾನಾಸ್ಪದವಾಗಿ ಸಾವೀಗಿಡಾದರು. ಆ ಸಾವುಗಳೆಲ್ಲವನ್ನು ಆತ್ಮಹತ್ಯೆ ಎಂದು ವರದಿ ಕೊಡಿಸಿದಿರಿ. ದಕ್ಷ ಅಧಿಕಾರಿಗಳ ಮೇಲೆ ಹಲ್ಲೆಗಳಾದವು. ಹಾಡುಹಗಲಿನಲ್ಲಿಯೇ ಸರಗಳ್ಳರು ತಮ್ಮ ಪರಾಕ್ರಮ ಮೆರೆದರು. ಹಸುಳೆಗಳ ಮೇಲೆ ಅತ್ಯಾಚಾರಗಳಾದವು.

ನಮಗೆ ಬೇಕಾಗಿರುವುದು ನಿಮ್ಮ ಕಮ್ಯುನಿಸ್ಟ್ ಸಿದ್ದಾಂತದ ನಾಡಲ್ಲ. ನಮಗೆ ಬೇಕಾಗಿರುವುದು ಬುದ್ದ-ಬಸವ-ಅಂಬೇಡ್ಕರ್ ರವರ ಕನಸಿನಂತ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಅನ್ನುವ ನಾಡು. ನಮ್ಮ ಪರಮಪೂಜ್ಯ ಶಿವಕುಮಾರ ಸ್ವಾಮಿಗಳು ಸಿದ್ದಗಂಗೆಯ ರೀತಿ ಇರಬೇಕು ನಮ್ಮ ನಾಡು. ನಿಜವಾದ ದೇವರು ನಮ್ಮ ಶಿವಕುಮಾರ ಸ್ವಾಮೀಜಿಗಳು.

ದಯವಿಟ್ಟು ಕ್ಷಮಿಸಿ ಸಿದ್ದರಾಮಯ್ಯನವರೇ..ಇಷ್ಟು ದಿನ ನನಗೆ ಜಾತಿಯ ವ್ಯಾಮೋಹ ಭಾದಿಸುತ್ತಿತ್ತು.. ಕಾರಣಕ್ಕಾಗಿ ನಿಮಗೆ ಮತ ನೀಡುತ್ತಿದ್ದೆ…

ಆದರೆ ಈಗ ನನಗೆ ಜ್ಞಾನೋದಯವಾಗಿದೆ…

ನನ್ನ ನಾಡಿಗಾಗಿ ಹೋರಾಡುವವರಿಗೆ ನನ್ನ ಮತ..ನನ್ನ ಭಾಷೆಯನ್ನು ರಕ್ಷಿಸುವವರಿಗೆ ನನ್ನ ಮತ…ನಮ್ಮ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವವರಿಗೆ ನನ್ನ ಮತ.. ಕರ್ನಾಟಕದಲ್ಲಿ ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು ಅನ್ನುವವರಿಗೆ ನಾನು ಮತ ಹಾಕುತ್ತೆನೆ ಹಾಗೂ ನಮ್ಮ ಸಮುದಾಯದವರಿಗೆ ಅಂಟಿರುವ ಜಾತಿ ಪ್ರೇಮ ಎಂಬ ಧೂಳನ್ನು ವರೆಸಿ ಅವರ ಮತವನ್ನು ಸರ್ವರಿಗೂ ಸಮಪಾಲು – ಸರ್ವರಿಗೂ ಸಮಬಾಳು ಅನ್ನುವವರಿಗೆ ಹಾಕಿಸುತ್ತೆನೆ..

 

-ಬಸಪ್ಪ ಕುರುಬರ್

ಮೂಲ:ಕರುನಾಡ ನೇಗಿಲ ಯೋಗಿ – https://www.karunadanegilayogi.com/