ಭಾರತದ ಒಬ್ಬ ಯೋಧನ ಹತ್ಯೆಗೆ ಪ್ರತಿಕಾರವಾಗಿ 10 ಪಾಕಿಸ್ಥಾನಿಯರನ್ನು ಹತ್ಯೆ ಮಾಡಬೇಕು: ಕ್ಯಾಪ್ಟನ್ ಅಮರೇಂದರ್ ಸಿಂಗ್

ಪಾಕಿಸ್ಥಾನ ನಿರಂತರ ನಡೆಸುತ್ತಿರುವ ಕದನವಿರಾಮ ಉಲ್ಲಂಘನೆ, ಅಪ್ರಚೋದಿತ ದಾಳಿಯ ವಿರುದ್ಧ ಕಿಡಿಕಾರಿರುವ ಮಾಜಿ ಸೇನಾಧಿಕಾರಿ,  ಕ್ಯಾಪ್ಟನ್ ಅಮರೇಂದರ್ ಸಿಂಗ್, ಒರ್ವ ಯೋಧನ ಹತ್ಯೆಗೆ ಪ್ರತಿಯಾಗಿ 10 ಪಾಕಿಸ್ಥಾನೀಯರ ಹತ್ಯೆಯಾಗಬೇಕು ಎಂದಿದ್ದಾರೆ.

ಇಂದು ಬೆಳಿಗ್ಗೆ ಪಾಕ್‌ನ ನೀಚ ಕೃತ್ಯಕ್ಕೆ ಬಿಎಸ್‌ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಮರೇಂದರ್ ಈ ಹೇಳಿಕೆ ನೀಡಿದ್ದಾರೆ.

ಭಾರತದ ಒಬ್ಬ ಯೋಧನ ಹತ್ಯೆಗೆ ಪ್ರತಿಕಾರವಾಗಿ 10 ಪಾಕಿಸ್ಥಾನಿಯರನ್ನು ಹತ್ಯೆ ಮಾಡಬೇಕು, ಇದು ನಾನು ಬದುಕನ್ನು ನೋಡುವ ರೀತಿ ಎಂದಿದ್ದಾರೆ.

ಅಮರೇಂದರ್ ಅವರು 1965ರ ಭಾರತ-ಪಾಕಿಸ್ಥಾನ ಯುದ್ಧದ ಸಂದರ್ಭ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದರು.

ಮೂಲ:news13

Featured
Comments (0)
Add Comment