ಪಾಕಿಸ್ಥಾನ ನಿರಂತರ ನಡೆಸುತ್ತಿರುವ ಕದನವಿರಾಮ ಉಲ್ಲಂಘನೆ, ಅಪ್ರಚೋದಿತ ದಾಳಿಯ ವಿರುದ್ಧ ಕಿಡಿಕಾರಿರುವ ಮಾಜಿ ಸೇನಾಧಿಕಾರಿ, ಕ್ಯಾಪ್ಟನ್ ಅಮರೇಂದರ್ ಸಿಂಗ್, ಒರ್ವ ಯೋಧನ ಹತ್ಯೆಗೆ ಪ್ರತಿಯಾಗಿ 10 ಪಾಕಿಸ್ಥಾನೀಯರ ಹತ್ಯೆಯಾಗಬೇಕು ಎಂದಿದ್ದಾರೆ.
ಇಂದು ಬೆಳಿಗ್ಗೆ ಪಾಕ್ನ ನೀಚ ಕೃತ್ಯಕ್ಕೆ ಬಿಎಸ್ಎಫ್ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಮರೇಂದರ್ ಈ ಹೇಳಿಕೆ ನೀಡಿದ್ದಾರೆ.
ಭಾರತದ ಒಬ್ಬ ಯೋಧನ ಹತ್ಯೆಗೆ ಪ್ರತಿಕಾರವಾಗಿ 10 ಪಾಕಿಸ್ಥಾನಿಯರನ್ನು ಹತ್ಯೆ ಮಾಡಬೇಕು, ಇದು ನಾನು ಬದುಕನ್ನು ನೋಡುವ ರೀತಿ ಎಂದಿದ್ದಾರೆ.
ಅಮರೇಂದರ್ ಅವರು 1965ರ ಭಾರತ-ಪಾಕಿಸ್ಥಾನ ಯುದ್ಧದ ಸಂದರ್ಭ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದರು.
ಮೂಲ:news13