Exclusive: RTI ನಿಂದ ಬಯಲಾಯಿತು ಸಿಎಂ ಮನೆ ಹೊರಗಿನ ಅಲಂಕಾರಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿರೋದು..!!

Exclusive: RTI ನಿಂದ ಬಯಲಾಯಿತು ಸಿಎಂ ಮನೆ ಹೊರಗಿನ ಅಲಂಕಾರಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿರೋದು..!!

0

ಹೌದು ಒಂದು ಕಡೆ ರಾಜ್ಯದಲ್ಲಿ ಒಂದಾದ ಮೇಲೊಂದು ಹೆಣ ಬಿಳುತಿದರೆ ನಮ್ಮ ಸಿದ್ದರಾಮಯ್ಯ ಸಾಹೇಬರು ಮಾತ್ರ ಕ್ಯಾರೇ ಎನ್ನದೇ ತಮ್ಮ ಅಧಿಕೃತ ನಿವಾಸ ಕೃಷ್ಣ ಅಲಂಕಾರಕ್ಕೆ ದುಂದು ವೆಚ್ಚ ಮಾಡಿದ್ದಾರೆ.

Cmhouse

ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ಸಿದ್ದರಾಮಯ್ಯ ಅವರು ಈ ಬಾರಿ ಮತೊಮ್ಮೆ ಸುದ್ದಿಯಾಗಿದ್ದಾರೆ..!

RTI ನಿಂದ ಬಯಲಾಗಿದೆ ಮತ್ತೊಂದು ಅಂಕಿ ಅಂಶ!!

CmHouse

ನಾನು ಬಹಳ ಸರಳ ವ್ಯಕ್ತಿ ಅಂತ ಹೇಳಿಕೊಳ್ಳುವ ನಮ್ಮ ಮುಖ್ಯಮಂತ್ರಿಗಳು ತಮ್ಮ ಅಧಿಕೃತ ನಿವಾಸ ಕೃಷ್ಣ ಗೆ ಬರೋಬರಿ ೫ ಲಕ್ಷ ರೂಪಾಯಿಗಳು ಅಲಂಕಾರಕ್ಕೆ ಉಪಯೋಗಿಸಿದ್ದಾರೆ.

ಸಿಎಂ ನಿವಾಸಗಳಾದ ಕಾವೇರಿ, ಕೃಷ್ಣ ನಿವಾಸಗಳ ಹೋರಗಿನ ಚಿಕ್ಕ ಚಿಕ್ಕ ಕೆಲಸಕ್ಕೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದುಬಾರಿ ಜೀವನ ನಡೆಸ್ತಿದ್ದಾರೆ. ಕಾವೇರಿ, ಕೃಷ್ಣದ ಕೌಂಪೌಂಡ್‍ಗೆ ಬಣ್ಣ ಬಳಿಯಲು, ಮೇಲ್ಛಾವಣಿ ಸರಿ ಮಾಡಲು, ಕಾರ್ ಗ್ಯಾರೇಜ್ ಸರಿ ಮಾಡಲು, ಮಳೆ ನೀರು ಕೋಯ್ಲು ಅಳವಡಿಸಿಕೊಳ್ಳಲು ಬರೋಬ್ಬರಿ ಒಂದು ಕೋಟಿ ರೂ. ಈ ವರ್ಷಕ್ಕೆ ಖರ್ಚು ಮಾಡಿ ಬಿಂದಾಸ್ ಲೈಫ್ ಲೀಡ್ ಮಾಡುತ್ತಿದ್ದಾರೆ. ಒಂದೇ ಕಾಮಗಾರಿಗೆ 2 ಬಾರಿ ಬಿಲ್: ಸಿದ್ದರಾಮಯ್ಯ ಅವರು ಮನೆಯ ಹೊರಗಿನ ಅಲಂಕಾರಕ್ಕೆ ಇಷ್ಟು ಖರ್ಚು ಮಾಡಿ ರಾಯಲ್ ಲೈಫ್ ಲೀಡ್ ಮಾಡುತ್ತಿದ್ದಾರೆ, ಇದರಲ್ಲೂ ಲೋಕೋಪಯೋಗಿ ಇಲಾಖೆ ಅಧಿಕಾರಗಳು ಗೋಲ್‍ಮಾಲ್ ಮಾಡಿದ್ದಾರೆ. ಸಿಎಂ ಮನೆ ಮುಂದೆ ಎಷ್ಟೋ ಕೆಲಸಗಳು ಆಗದೆ ಬಿಲ್ ಮಾಡಿಕೊಂಡಿದ್ದಾರೆ. ಪೊಲೀಸ್ ಚೌಕಿ ನಿರ್ಮಾಣದ ಹೆಸರಲ್ಲಿ, ಇನ್ನಿತರ ಕೆಲಸಗಳಿಗೆ ಎರೆಡರೆಡು ಬಾರಿ ಬಿಲ್ ಮಾಡಿ ಹಣ ಲೂಟಿ ಮಾಡಿದ್ದಾರೆ. 5 ಲಕ್ಷ ಮೇಲ್ಪಟ್ಟ ಕಾಮಗಾರಿಗೆ ಟೆಂಡರ್ ಕರೆಯಬೇಕು. ಹೀಗೆ ಮಾಡಿದರೆ ದುಡ್ಡು ಸಿಗೋಲ್ಲ ಅಂತ 5 ಲಕ್ಷದ ಒಳಗೆ ಎಲ್ಲಾ ಕಾಮಗಾರಿ ಮುಗಿಸಿ ಜಾಣ್ಮೆಯಿಂದ ಹಣ ಲೂಟಿ ಮಾಡಿದ್ದಾರೆ.

Cmhouse

ಈ ಕಾಮಗಾರಿಗಳನ್ನ ಪ್ರತಿ ವರ್ಷ ಮಾಡಬೇಕಿಲ್ಲವಾದರೂ ವರ್ಷ ವರ್ಷ ಲೋಕೋಪಯೋಗಿ ಇಲಾಖೆ ಕೋಟಿ ಖರ್ಚು ಮಾಡುತ್ತಿದೆ. ಇದೆಲ್ಲ ಸಿಎಂಗೆ ಗೊತ್ತಿದ್ದರೂ ಸುಮ್ಮನಿರೋದು ಮಾತ್ರ ವಿಪರ್ಯಾಸವೇ ಸರಿ.

 

– Please share this news