ಮತ್ತೊಮ್ಮೆ ಕನ್ನಡಿಗರ ಮನಗೆದ್ದ ನಿರ್ಮಲಾ ಸೀತಾರಾಮನ್ ! ಮಾಡಿದ್ದೇನು ಗೊತ್ತಾ??

ಮತ್ತೊಮ್ಮೆ ಕನ್ನಡಿಗರ ಮನಗೆದ್ದ ನಿರ್ಮಲಾ ಸೀತಾರಾಮನ್ ! ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕೇವಲ ಕೆಲವೇ ಕೆಲವು ವರ್ಷಗಳ ಹಿಂದೆ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡಿದ್ದ ಮಹಿಳೆ ಯೊಬ್ಬರು ಇಂದು ಭಾರತದ ವಿತ್ತ ಸಚಿವೆಯಾಗಿ ಕೆಲಸ ಮಾಡುತ್ತಿದ್ದಾರೆ. ಮೋದಿ ಸರ್ಕಾರದ ಮೊದಲನೇ ಅವಧಿಯಲ್ಲಿ ವಿಶ್ವದಲ್ಲಿಯೇ ಬಲಾಢ್ಯ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ ದೇಶದ ರಕ್ಷಣಾ ಸಚಿವೆಯಾಗಿಯೂ ಕೆಲಸ ಮಾಡಿದ್ದಾರೆ ಅವರೇ ನಿರ್ಮಲಾ ಸೀತಾರಾಮನ್.

ಹೌದು, ವಿಶ್ವದಲ್ಲಿಯೇ ಪ್ರಭಾವಿ ಮಹಿಳೆಯರಲ್ಲಿ ಮೊದಲನೆಯ ಸಾಲಿನಲ್ಲಿ ನಿಲ್ಲುವ ನಿರ್ಮಲಾ ಸೀತಾರಾಮನ್ ರವರು ರಾಜ್ಯಸಭೆಯ ಮೂಲಕ ಆಯ್ಕೆಯಾಗಿರುವುದು ಕರ್ನಾಟಕದಿಂದ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ. ಇವರನ್ನು ಕೆಲವರು ನೀವು ಕನ್ನಡಿಗರಲ್ಲ ಎಂದು ಟೀಕೆ ಮಾಡುತ್ತಾರೆ, ಆದರೆ ಇವರಿಗೆ ಕನ್ನಡದ ಮೇಲಿನ ಪ್ರೀತಿ ಎಷ್ಟರ ಮಟ್ಟಿಗೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಳೆದ ಹಲವಾರು ಬಾರಿ ಕರ್ನಾಟಕಕ್ಕೆ ಭೇಟಿಯಾದ ಸಂದರ್ಭದಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಮನಗೆದ್ದಿದ್ದ ನಿರ್ಮಲ ಸೀತಾರಾಮನ್ ರವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ, ಇದು ಒಂದು ಚಿಕ್ಕ ವಿಷಯ ವಾದರೂ ಕನ್ನಡಿಗರ ಮನಸ್ಸಿಗೆ ಮುದ ನೀಡಿರುವುದು ಸುಳ್ಳಲ್ಲ. ಅಷ್ಟಕ್ಕೂ ನಡೆದದ್ದೇನು ಗೊತ್ತಾ??

ನಿಮಗೆಲ್ಲರಿಗೂ ತಿಳಿದಿರುವಂತೆ ಗಣ ರಾಜ್ಯೋತ್ಸವದ ಅಂಗವಾಗಿ ವಿವಿಧ ರಾಜ್ಯಗಳ ಸ್ತಬ್ಧ ಚಿತ್ರಗಳು ದೆಹಲಿಯ ರಾಜಪಥದಲ್ಲಿ ರಾರಾಜಿಸಿದವು, ಇನ್ನು ಕರ್ನಾಟಕದ ರಾಜ್ಯದ ಸ್ತಬ್ಧಚಿತ್ರ ಅನುಭವ ಮಂಟಪ ಕೂಡ ಎಲ್ಲರ ಗಮನ ಸೆಳೆದಿತ್ತು. ಅದೇ ಸಮಯದಲ್ಲಿ ರಾಜ್ಯದ ಸ್ತಬ್ಧಚಿತ್ರ ಅನುಭವ ಮಂಟಪ ತಮ್ಮ ಮುಂದೆ ಸಾಗುತ್ತಿರುವುದನ್ನು ಕಂಡ ನಿರ್ಮಲ ಸೀತಾರಾಮನ್ ರವರು ಎದ್ದು ನಿಂತು ಕರ್ನಾಟಕದ ಸ್ತಬ್ಧಚಿತ್ರಕ್ಕೆ ಗೌರವ ಸೂಚಿಸಿದರು. ಇವರು ಬೇರೆ ರಾಜ್ಯದವರು ಆಗಿರಬಹುದು, ಆದರೆ ನನ್ನನ್ನು ಆಯ್ಕೆ ಮಾಡಿದ ಕರ್ನಾಟಕ ರಾಜ್ಯಕ್ಕೆ ನೀಡಿದ ಗೌರವ ಕನ್ನಡಿಗರ ಮನ ಗೆದ್ದಿದೆ. ಇದು ಕೆಲವರಿಗೆ ಬಹಳ ಚಿಕ್ಕ ವಿಷಯ ಎನಿಸಬಹುದು ಆದರೆ ಹಲವಾರು ಜನರು ನಿರ್ಮಲ ಸೀತಾರಾಮನ್ ರವರ ಈ ನಡೆಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.