ತುಕಡೆ ಗ್ಯಾಂಗ್ ಪ್ರಮುಖ ನಾಯಕನಿಗೆ ಮರ್ಮಾಘಾತ ! ಅಸ್ಸಾಂ ವಿಭಜಿಸುತ್ತೇನೆ ಎಂದ ಪ್ರಕರಣಕ್ಕೆ ಫೈಯರ್ ಬ್ರಾಂಡ್ ಸ್ವಾಮಿ ಎಂಟ್ರಿ ! ಮಾಡಲು ಹೊರಟಿರುವುದು ಏನು ಗೊತ್ತಾ??

ತುಕಡೆ ಗ್ಯಾಂಗ್ ಪ್ರಮುಖ ನಾಯಕನಿಗೆ ಮರ್ಮಾಘಾತ ! ಅಸ್ಸಾಂ ವಿಭಜಿಸುತ್ತೇನೆ ಎಂದ ಪ್ರಕರಣಕ್ಕೆ ಫೈಯರ್ ಬ್ರಾಂಡ್ ಸ್ವಾಮಿ ಎಂಟ್ರಿ ! ಮಾಡಲು ಹೊರಟಿರುವುದು ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಮಾಜಿ ಜೆಎನ್ಯು ವಿದ್ಯಾರ್ಥಿ ಹಾಗೂ ಶಹೀನ್ ಬಾಗ್ ಕೋ-ಆರ್ಡಿನೇಷನ್ ಕಮಿಟಿ ಮುಖ್ಯಸ್ಥ ಶಾರ್ಜೀಲ್ ಇಮಾಮ್ ದೇಶದಲ್ಲೆಡೆ ತಮ್ಮ ಹೇಳಿಕೆಯ ಮೂಲಕ ತಲ್ಲಣ ಸೃಷ್ಟಿಸಿದ್ದಾರೆ. ಈ ಪ್ರಕರಣಕ್ಕೆ ಇದೀಗ ಸುಬ್ರಹ್ಮಣ್ಯ ಸ್ವಾಮಿ ರವರು ಎಂಟ್ರಿ ಯಾಗಿದ್ದು ತುಕಡೆ ತುಕಡೆ ಮಾಡುತ್ತೇನೆ ಎಂದಿದ್ದ ಶಾರ್ಜೀಲ್ ಇಮಾಮ್ ಗೆ ಬಿಗ್ ಶಾಕ್ ನೀಡಲು ಮುಂದಾಗಿದ್ದಾರೆ.

ಹೌದು, ಸಾಮಾಜಿಕ ಜಾಲ ತಾಣಗಳಲ್ಲಿ ಈಗಾಗಲೇ ಬಾರಿ ವೈರಲ್ ಆಗಿರುವ ವಿಡಿಯೋದಲ್ಲಿ ಶಾರ್ಜೀಲ್ ಇಮಾಮ್ ಪೌರತ್ವ ತಿದ್ದುಪಡಿ ಮಸೂದೆಗೆ ವಿರುದ್ಧವಾಗಿ ಮುಸಲ್ಮಾನ್ ಬಾಂಧವರನ್ನು ಬಳಸಿ ಕೊಂಡು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಶಾಂತಿ ಕೆದಡುವ ಭಾಷಣ ಮಾಡಿದ್ದಾರೆ. ನಮ್ಮ ಮುಖ್ಯ ಗುರಿ ಅಸ್ಸಾಂ ರಾಜ್ಯವನ್ನು ಹಾಗೂ ಈಶಾನ್ಯ ಭಾರತವನ್ನು ದೇಶದ ಇತರ ಭಾಗಗಳಿಂದ ಬೇರ್ಪಡಿಸುವುದು ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ. ನಾವು ಒಟ್ಟಾಗಿ ಐದು ಲಕ್ಷ ಜನ ಸೇರಿಕೊಂಡು ಈಶಾನ್ಯ ವನ್ನು ಭಾರತದ ಉಳಿದ ಭಾಗಗಳಿಂದ ಕತ್ತರಿಸಿ ಬಿಡಬಹುದು ಎಂದು ಹೇಳಿದ ವಿಡಿಯೋ ಬಹಿರಂಗವಾಗಿದೆ. ಒಂದೆಡೆ ನೆಟ್ಟಿಗರು ಶಾರ್ಜೀಲ್ ಇಮಾಮ್ ರವರ ವಿರುದ್ಧ ಕಿಡಿಕಾರಿದ್ದರೇ ಮತ್ತೊಂದೆಡೆ ಸುಬ್ರಮಣ್ಯಂ ಸ್ವಾಮಿ ಅವರು ನೋಡಿದ ಕೂಡಲೇ ತಾವೇ ಅಖಾಡಕ್ಕೆ ಇಳಿದಿದ್ದಾರೆ.

ಇದರ ಕುರಿತು ಮಾತನಾಡಿರುವ ಸುಬ್ರಹ್ಮಣ್ಯಂ ಸ್ವಾಮಿ ರವರು, ನನಗೆ ಇವರ ಹೇಳಿಕೆಯಿಂದ ಯಾವುದೇ ಆಶ್ಚರ್ಯ ವಾಗುತ್ತಿಲ್ಲ. ಅವರಿಗೆ ದುಡ್ಡು ಕೊಡುವುದು ಅದೇ ಕಾರಣಕ್ಕೆ, ಆದರೆ ನನಗೆ ಆಶ್ಚರ್ಯ ವಾಗುತ್ತಿರುವ ವಿಷಯವೇನೆಂದರೇ ನಾವು ಯಾತಕ್ಕೆ ಇಂಥವರನ್ನು ಸಹಿಸಿ ಕೊಳ್ಳಬೇಕು, ಇವರ ಬಗ್ಗೆ ಯಾಕೆ ಸಹನೆ ತೋರುತ್ತಿದ್ದೇವೆ. ಇವರೆಲ್ಲರೂ ಪೌರತ್ವ ತಿದ್ದುಪಡಿ ಮಸೂದೆಯ ಬಗ್ಗೆ ತಿಳಿದುಕೊಳ್ಳದೇ ಕಿರುಚುತ್ತಿರುವ ಅನಕ್ಷರಸ್ಥರು. ಇವರು ಈ ಬಗ್ಗೆ ನನ್ನ ಜೊತೆ ಚರ್ಚೆ ಮಾಡಲು ಅಥವಾ ಯಾವುದೇ ಷರತ್ತುಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಇವರೆಲ್ಲರನ್ನು ಇದೀಗ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ 30 ವರ್ಷಗಳ ಕಾಲ ದೂರವಿಡ‌ ಬಹುದು, ಈ ಕೂಡಲೇ ಆ ಕೆಲಸವನ್ನು ಮಾಡುತ್ತೇನೆ. ಶಾಹಿನ್ ಬಾಗ್ ಕಮಿಟಿ ಯಲ್ಲಿರುವ ಎಲ್ಲಾ ಜನರನ್ನು ತುಘಲಕಾಬಾದ್ ಗೆ ಕರೆದುಕೊಂಡು ಹೋಗಿ ಅಲ್ಲಿರುವ ತೆರೆದ ಮೈದಾನದಲ್ಲಿ ಗುಡಿಸಲುಗಳಲ್ಲಿ ವಾಸಿಸಲು ಬಿಟ್ಟು, ಮನೆಗೆ ಹೋಗಲು ಒಪ್ಪುವವರೆಗೂ ಅವರನ್ನು ಅಲ್ಲೇ ಇಟ್ಟು ಬಿಡಬೇಕು. ಇನ್ನು ಮುಂದೆ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಈ ಕೂಡಲೇ ಇದರ ಕುರಿತು ಕ್ರಮ ತೆಗೆದು ಕೊಳ್ಳುತ್ತೇನೆ ಎಂದಿದ್ದಾರೆ.