ಸಿದ್ದು ವಿರುದ್ಧ ತಿರುಗಿ ಬಿದ್ದ ಸೋನಿಯಾ ! ಕಳೆದ 11 ವರ್ಷಗಳ ಸಿದ್ದು ಆಟಕ್ಕೆ ಬ್ರೇಕ್ ಹಾಕಲು ಮತ್ತೊಂದು ಕಠಿಣ ನಿರ್ಧಾರ ಮಾಡಿದ ಸೋನಿಯಾ ! ಏನು ಗೊತ್ತಾ??

ಸಿದ್ದು ವಿರುದ್ಧ ತಿರುಗಿ ಬಿದ್ದ ಸೋನಿಯಾ ! ಕಳೆದ 11 ವರ್ಷಗಳ ಸಿದ್ದು ಆಟಕ್ಕೆ ಬ್ರೇಕ್ ಹಾಕಲು ಮತ್ತೊಂದು ಕಠಿಣ ನಿರ್ಧಾರ ಮಾಡಿದ ಸೋನಿಯಾ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಕಾಳಗದ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಒಂದೆಡೆ ಡಿ ಕೆ ಶಿವಕುಮಾರ್ ರವರು KPCC ಪಟ್ಟಕ್ಕೆ ಏರುತ್ತಿರುವುದು ಸಿದ್ದು ಹಾಗೂ ಹಿರಿಯ ನಾಯಕರ ಬಣದಲ್ಲಿ ಅಸಮಾಧಾನ ಮೂಡಿಸಿದೆ. ಅದರಲ್ಲಿಯೂ ಇಷ್ಟು ದಿವಸ ಹಿರಿಯ ನಾಯಕರನ್ನು ಪಕ್ಕಕ್ಕೆ ಸರಿಸಿ ಅಧಿಕಾರ ನಡೆಸುತ್ತಿದ್ದಾರೆ ಎನ್ನುವ ಆರೋಪ ಹೊತ್ತಿದ್ದ ಸಿದ್ದರಾಮಯ್ಯ ನವರ ಆಕ್ರೋಶ ಹೆಚ್ಚಾಗಿದೆ.

ಇದೇ ಕಾರಣಕ್ಕಾಗಿ ಕಾರ್ಯದಕ್ಷರನ್ನು ಆಯ್ಕೆ ಮಾಡುವ ಮೂಲಕ ಡಿ ಕೆ ಶಿವಕುಮಾರ್ ರವರಿಗೆ ಮೂಗು ದಾರ ಹಾಕಲೂ ಹೋದ ಸಿದ್ದರಾಮಯ್ಯ ರವರಿಗೆ ಇದೀಗ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಸೋನಿಯಾ ಗಾಂಧಿ ರವರು ಶಾಕ್ ನೀಡಲು ಹೊರಟಿದ್ದಾರೆ ಎನ್ನಲಾಗಿದೆ. ಹೌದು, ಸಿದ್ದರಾಮಯ್ಯ ಮಾಡಿದ ಪ್ಲಾನ್ ಉಲ್ಟಾ ಹೊಡೆದಿದೆ, ಇಷ್ಟು ದಿವಸ ಕಳೆದ 11 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಮೆರೆದ ಸಿದ್ದರಾಮಯ್ಯ ರವರ ವಿರುದ್ಧ ಇದೀಗ ಹೈ ಕಮಾಂಡ್ ತಿರುಗಿ ಬಿದ್ದಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹೌದು ತನ್ನ ಬೆಂಬಲಿಗರಿಗೆ ಕೆಪಿಸಿಸಿ ಪಟ್ಟವನ್ನು ಕೊಡಿಸಲು ವಿಫಲವಾದ ಬೆನ್ನಲ್ಲೇ ಹೋದರೆ ಹೋಗಲಿ ತನ್ನ ವಿಪಕ್ಷ ನಾಯಕನ ಸ್ಥಾನ ಹಾಗೂ CLP ನಾಯಕರ ಸ್ಥಾನ ಉಳಿದು ಕೊಂಡಿತಲ್ಲ ಎನ್ನುವಷ್ಟರಲ್ಲಿ ಹೈ ಕಮಾಂಡ್ ಮತ್ತೊಂದು ಸಂದೇಶ ರವಾನಿಸಿದೆ. ಮೂಲಗಳ ಪ್ರಕಾರ, ಸಿದ್ದರಾಮಯ್ಯ ನವರಿಗೆ ಕೇವಲ ವಿಪಕ್ಷ ನಾಯಕನ ಸ್ಥಾನ ನೀಡಿ, CLP ನಾಯಕನ ಸ್ಥಾನವನ್ನು ಮತ್ತೊಬ್ಬರಿಗೆ ನೀಡಲು ಸೋನಿಯಾ ಗಾಂಧಿ ಮುಂದಾಗಿದ್ದಾರೆ. ಈ ನಿರ್ಧಾರ ಘೋಷಣೆ ಮಾಡಿದರೇ ಯಾವುದೇ ಅನುಮಾನ ಬೇಡ ಎಂದು ಸೋನಿಯಾ ತಿಳಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಿದ್ದರಾಮಯ್ಯ ನವರ ಕಳೆದ 11 ವರ್ಷಗಳ ಏಕಮೇವ ಚಕ್ರಾಧಿಪತ್ಯಕ್ಕೆ ಗೌರವಯುತ ವಿದಾಯಕ್ಕೆ ಪರೋಕ್ಷ ಸಂದೇಶ ರವಾನೆ ಮಾಡಿದೆ ಎಂಬ ಮಾತುಗಳು ಕೇಳಿಬಂದಿವೆ.