ದೀಪಿಕಾಗೆ ಬಿಗ್ ಶಾಕ್, ಅಕಾಡಕ್ಕೆ ಫೈರ್ ಬ್ರಾಂಡ್ ! ದೀಪಿಕಾ ಸಿನಿಮಾದ ವಿರುದ್ಧ ಅಖಾಡಕ್ಕಿಳಿದು ಸ್ವಾಮಿ ಮಾಡಲು ಹೊರಟಿರುವುದಾದರೂ ಏನು ಗೊತ್ತಾ?

ದೀಪಿಕಾಗೆ ಬಿಗ್ ಶಾಕ್, ಅಕಾಡಕ್ಕೆ ಫೈರ್ ಬ್ರಾಂಡ್ ! ದೀಪಿಕಾ ಸಿನಿಮಾದ ವಿರುದ್ಧ ಅಖಾಡಕ್ಕಿಳಿದು ಸ್ವಾಮಿ ಮಾಡಲು ಹೊರಟಿರುವುದಾದರೂ ಏನು ಗೊತ್ತಾ?

ದೀಪಿಕಾ ಪಡುಕೋಣೆ ರವರು ದೆಹಲಿಯಲ್ಲಿ ತುಕಡಿಗಳ ಬೆಂಬಲಕ್ಕೆ ನಿಂತಿದ್ದ ಕಾರಣಕ್ಕೆ ಈಗಾಗಲೇ ತಕ್ಕ ಪ್ರತಿಫಲವನ್ನು ಅನುಭವಿಸುತ್ತಿದ್ದಾರೆ. ಹೀಗಿರುವಾಗ ಚಪ್ಪಕ್ ಸಿನಿಮಾಗೆ ಅಸಲಿ ಆಟವನ್ನು ತೋರಿಸಲು ಸುಬ್ರಹ್ಮಣ್ಯ ಸ್ವಾಮಿ ರವರು ಖುದ್ದು ಅಖಾಡಕ್ಕೆ ಇಳಿದಿದ್ದಾರೆ.

ಹೌದು ಸದಾ ದೇಶ ಹಾಗೂ ಧರ್ಮದ ಪರ ಧ್ವನಿ ಎತ್ತುವ ಸುಬ್ರಹ್ಮಣ್ಯಸ್ವಾಮಿ ರವರು ಇದೀಗ ಚಪ್ಪಕ್ ಸಿನಿಮಾದಲ್ಲಿ ಆರೋಪಿಯ ಧರ್ಮವನ್ನು ಬದಲಾಯಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದ ಕಾರಣ ತಾವೇ ಅಖಾಡಕ್ಕೆ ಇಳಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸಾಕ್ಷಿ ಸಮೇತ ಚಪ್ಪಕ್ ಸಿನಿಮಾದಲ್ಲಿ ಆರೋಪಿಯ ಹೆಸರನ್ನು ಬದಲಾಯಿಸಲಾಗಿದೆ ಎನ್ನುವ ಮಾಹಿತಿಗಳು ಕೇಳಿಬರುತ್ತಿವೆ. ಇನ್ನು ಕೆಲವರು ಯಾವುದೇ ಹೆಸರು ಬದಲಾಯಿಸಿಲ್ಲ ಎಂದು ವಾದಕ್ಕೆ ಇಳಿದಿದ್ದಾರೆ. ಇದರ ಬೆನ್ನಲ್ಲೇ ಚಿತ್ರತಂಡವು ವಿಕಿಪೀಡಿಯ ಲೇಖನದ ಪ್ರಕಾರ ಅಲ್ಪ ಸಂಖ್ಯಾತರ ಹಿತಾಸಕ್ತಿಗಳನ್ನು ಉಳಿಸಲು ಹಾಗೂ ಜಾತ್ಯತೀತವಾಗಿರಲು ದಾಳಿಕೋರರ ಹೆಸರನ್ನು ಹಿಂದೂ ಹೆಸರಾಗಿ ಬದಲಾಯಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ವಿಷಯ ತಿಳಿದ ತಕ್ಷಣ ಸುಬ್ರಹ್ಮಣ್ಯಂ ಸ್ವಾಮಿರವರು, ಚಿತ್ರತಂಡದ ವಿರುದ್ಧ ಕಿಡಿಕಾರಿದ್ದು ಒಂದು ವೇಳೆ ಚಲನಚಿತ್ರದಲ್ಲಿ ಹೆಸರು ಬದಲಾವಣೆ ಯಾಗಿದ್ದರೆ ಮಾನಹಾನಿ ಪ್ರಕರಣಗಳು ಅಡಿಯಲ್ಲಿ ದಾಖಲಾಗುತ್ತದೆ. (ವಕೀಲರನ್ನು ಟ್ಯಾಗ್ ಮಾಡಿ) ಇಷ್ಕರನ್ ಬಂಡಾರಿ ಅವರು ಇದೀಗ ದೀಪಿಕಾ ಪಡುಕೋಣೆ ಹಾಗೂ ನಿರ್ಮಾಪಕರಿಗೆ ಕಾನೂನಾತ್ಮಕ ನೋಟಿಸ್ ಕಳುಹಿಸುತ್ತಿದ್ದಾರೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುಬ್ರಹ್ಮಣ್ಯಂ ಸ್ವಾಮಿ ತಂಡದ ವಕೀಲರು, ಚಿತ್ರದಲ್ಲಿ ಆರೋಪಿಯ ಹೆಸರು ಏನು ಎಂದು ಕಂಡು ಹಿಡಿಯಲು ನಮ್ಮ ತಂಡಕ್ಕೆ ಸೂಚನೆ ನೀಡಿದ್ದೇನೆ ಒಂದು ವೇಳೆ ಹೆಸರನ್ನು ಬದಲಾಯಿಸಿರುವುದು ಕಂಡು ಬಂದಲ್ಲಿ ಕಾನೂನಾತ್ಮಕವಾಗಿ ತಕ್ಕ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಉತ್ತರ ನೀಡಿದ್ದಾರೆ. ಒಟ್ಟಿನಲ್ಲಿ ಈ ಮೂಲಕ ದೀಪಿಕಾ ಪಡುಕೋಣೆ ಅವರಿಗೆ ಮತ್ತೊಂದು ಕಠಿಣ ಸವಾಲು ಎದುರಾಗಿದ್ದು ಒಂದು ವೇಳೆ ನಿಜವಾಗಲೂ ಹೆಸರು ಬದಲಾಯಿಸಿದ್ದಲ್ಲಿ ಚಿತ್ರಕ್ಕೆ ಬಹುದೊಡ್ಡ ಹೊಡೆತ ನೀಡಲು ಸ್ವಾಮಿ ಮತ್ತು ತಂಡ ಸಿದ್ಧವಾಗಿದೆ.