ಒಹ್ ಹೋ- ಸಂಜಯ್ ರಾವತ್ ಮುಂದಿನ ಟಾರ್ಗೆಟ್ ಯಾವ ಕುರ್ಚಿಯಂತೆ ಗೊತ್ತಾ? ತಿಳಿದರೇ ಎದ್ದು ಬಿದ್ದು ನಗ್ತೀರಾ !

ಒಹ್ ಹೋ- ಸಂಜಯ್ ರಾವತ್ ಮುಂದಿನ ಟಾರ್ಗೆಟ್ ಯಾವ ಕುರ್ಚಿಯಂತೆ ಗೊತ್ತಾ? ತಿಳಿದರೇ ಎದ್ದು ಬಿದ್ದು ನಗ್ತೀರಾ !

ಇದೀಗ ಶಿವಸೇನಾ ಹಾಗೂ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮುರಿದು ಬೀಳಲು ಶಿವಸೇನಾ ಪಕ್ಷದ ಹಿರಿಯ ನಾಯಕರ ಸಂಜಯ್ ರಾವತ್ ರವರೇ ಕಾರಣ ಎಂದು ಎಲ್ಲರಿಗೂ ತಿಳಿದೇ ಇದೆ. ಶಿವಸೇನಾ ಪಕ್ಷದ ನಾಯಕ ಕುಟುಂಬವಾದ ಠಾಕ್ರೆ ಕುಟುಂಬವು ಇಲ್ಲಿಯವರೆಗೂ ಯಾವುದೇ ರಾಜಕೀಯ ಕುರ್ಚಿಗೆ ಆಸೆ ಬಿದ್ದಿರಲಿಲ್ಲ. ಯಾವೊಬ್ಬ ನಾಯಕರೂ ತಾನು ಶಾಸಕ ಕೂಡ ಆಗಬೇಕು ಎಂದುಕೊಂಡಿರಲಿಲ್ಲ. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಆದಿತ್ಯ ಠಾಕ್ರೆ ರವರನ್ನು ಕಣಕ್ಕೆ ಇಳಿಯುವಂತೆ ಮಾಡಿದ್ದು ಇವರೇ.

ಕಣಕ್ಕೆ ಇಳಿದ ನಂತರ ಗೆದ್ದು ಬಂಟ ತಕ್ಷಣ ಏಕಾ ಏಕಿ ಮುಖ್ಯಮಂತ್ರಿ ಕುರ್ಚಿಯ ಕನಸ್ಸು ಕಾಣುವಂತೆ ಮಾಡಿ, ಬಿಜೆಪಿ ಪಕ್ಷದ ಜೊತೆ ಮೈತ್ರಿ ತೊರೆಯುವಂತೆ ಮಾಡಿದ್ದರು. ಅಷ್ಟೇ ಅಲ್ಲದೇ ಶಿವಸೇನಾ ಪಕ್ಷವನ್ನು ಎನ್ಡಿಎ ಮೈತ್ರಿ ಕೂಟದಿಂದ ಹೊರಬರುವಂತೆ ಮಾಡಿದ್ದು ಇವರೇ. ಒಟ್ಟಾಗಿ ಅದೇಗೋ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡುವುದು ಖಚಿತವಾದ ಮೇಲೆ ಸಂಜಯ್ ರಾವತ್ ಮತ್ತೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿ ಇದ್ದಾರೆ. ಬೃಹತ್ ರಾಷ್ತ್ರೀಯ ಪಕ್ಷಗಳ ಕೈಯಲ್ಲಿ ಆಗದ ಕೆಲಸವನ್ನು ಇವರು ಮಾಡುತ್ತಾರಂತೆ ಅಷ್ಟಕ್ಕೂ ಅದೇನು ಗೊತ್ತಾ? ತಿಳಿಯಲು ಕೆಳಗಡೆ ಓದಿ.

ಹೌದು ಇದೀಗ ಬಿಜೆಪಿ ಪಕ್ಷವನ್ನು ಮಹಾರಾಷ್ಟ್ರದಲ್ಲಿ ಅಧಿಕಾರದಿಂದ ಇಳಿಸಿದ ಗೆಲುವಿನಲ್ಲಿ ತೇಲಾಡುತ್ತಿರುವ ಸಂಜಯ್ ರಾವತ್ ರವರು, ದೆಹಲಿಯ ಮೋದಿಯ ಗದ್ದುಗೆ ಮೇಲೆ ಕಣ್ಣಿಟ್ಟಿದ್ದಾರೆ. ಒಂದೆಡೆ ಮೈತ್ರಿಯಿಂದ ಕಾರ್ಯಕರ್ತರು ರೊಚ್ಚಿಗೆದ್ದಿರುವ ಬೆನ್ನಲ್ಲೇ ಶಿವಸೇನಾ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿರುವ ಸಂದರ್ಭದಲ್ಲಿ ಸಂಜಯ್ ರಾವತ್ ರವರು, ಏಕ ಏಕಿ ಮೋದಿ ರವರನ್ನು ಸೋಲಿಸುವ ಮಾತುಗಳನ್ನು ಆಡಿದ್ದಾರೆ. ಈಗ ಮಹಾರಾಷ್ಟ್ರ ದಲ್ಲಿ ಸರ್ಕಾರ ರಚನೆ ಆಯಿತು, ಮುಂದೆ ನಾವು ದೆಹಲಿಯ ಗದ್ದುಗೆ ಏರುತ್ತೇವೆ, ಆಶ್ಚರ್ಯ ಪಡಬೇಡಿ ಎಂದಿದ್ದಾರೆ. ಇದನ್ನು ಕಂಡ ಬಿಜೆಪಿ ಬೆಂಬಲಿಗರು, ಮೊದಲು ನಿಮ್ಮ ಶಾಸಕರು, ನಾಯಕರೂ ಹಾಗೂ ಕಾಯಕರ್ತರನ್ನು ಹಿಡಿದಿಟ್ಟುಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.