ಇದ್ದಕ್ಕಿದ್ದ ಹಾಗೇ ನರೇಂದ್ರ ಮೋದಿ ರವರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸುಬ್ರಹ್ಮಣ್ಯ ಸ್ವಾಮಿ ! ನೀಡಿದ ಸಲಹೆ ಏನು ಗೊತ್ತು??

ಇದ್ದಕ್ಕಿದ್ದ ಹಾಗೇ ನರೇಂದ್ರ ಮೋದಿ ರವರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸುಬ್ರಹ್ಮಣ್ಯ ಸ್ವಾಮಿ ! ನೀಡಿದ ಸಲಹೆ ಏನು ಗೊತ್ತು??

ಸದಾ ದೇಶ, ಹಿಂದುತ್ವ ಹಾಗೂ ಬಿಜೆಪಿ ಪಕ್ಷದ ಪರ ಧ್ವನಿ ಎತ್ತಿ ವಿರೋಧಿಗಳಿಗೆ ಅಕ್ಷರ ಸಹ ದುಃಸ್ವಪ್ನವಾಗಿ ಕಾಡುತಿದ್ದ ಸುಬ್ರಮಣ್ಯನ್ ಸ್ವಾಮಿ ರವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇಷ್ಟು ದಿವಸ ಮೋದಿ ಸರ್ಕಾರದ ಪರ ಧ್ವನಿ ಎತ್ತಿ ಎಲ್ಲಾ ರೀತಿಯ ಕಾನೂನು ರೀತಿಯಲ್ಲಿ ಬೆಂಬಲಕ್ಕೆ ನಿಲ್ಲುತಿದ್ದ ಸುಬ್ರಮಣ್ಯನ್ ಸ್ವಾಮಿ ರವರು ಇದೀಗ ನರೇಂದ್ರ ಮೋದಿ ರವರ ವಿರುದ್ಧ ಷಾಕಿಂಗ್ ಹೇಳಿಕೆ ನೀಡಿದ್ದಾರೆ. ಹೌದು, ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಸುಬ್ರಮಣ್ಯಂ ಸ್ವಾಮಿ ರವರು ಇತ್ತೀಚಿಗೆ ದೇಶದ ಆರ್ಥಿಕತೆಯ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಭಾರಿ ಟೀಕೆಗಳನ್ನು ಮಾಡುತ್ತಿದ್ದಾರೆ. ಅದರಲ್ಲಿಯೂ ನಿರ್ಮಲಾ ಸೀತಾರಾಮನ್ ರವರ ನಿರ್ಧಾರಗಳ ವಿರುದ್ಧ ಸಿಡಿದೆದ್ದಿರುವ ಸುಬ್ರಮಣ್ಯಂ ಸ್ವಾಮಿ ರವರು ಇದೀಗ ನರೇಂದ್ರ ಮೋದಿ ಅವರ ಬಗ್ಗೆ ಕಿಡಿಕಾರಿ ಎಲ್ಲರ ಹುಬ್ಬೇರಿಸಿದ್ದಾರೆ. ಅಷ್ಟೇ ಅಲ್ಲದೆ ಸತ್ಯವನ್ನು ಒಪ್ಪಿಕೊಳ್ಳುವಂತೆ ಸಲಹೆ ನೀಡುವ ಮೂಲಕ ನರೇಂದ್ರ ಮೋದಿ ರವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಹೌದು ದೇಶದ ಆರ್ಥಿಕತೆಯ ಬಗ್ಗೆ ಮತ್ತೊಮ್ಮೆ ಮಾತನಾಡಿರುವ ಸುಬ್ರಮಣ್ಯಂ ಸ್ವಾಮಿ ರವರು, ದೇಶದ ಆರ್ಥಿಕತೆ ಯನ್ನು ಬಲಪಡಿಸಲು ಹಾಗೂ ಸಂಕಷ್ಟದಿಂದ ಪಾರು ಮಾಡಲು ನಿಮಗೆ ನಿಜವಾದ ಮನಸ್ಸಿದ್ದರೆ, ದಯವಿಟ್ಟು ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಒಪ್ಪಿಕೊಳ್ಳಿ, ಈ ಕಹಿ ಸತ್ಯವನ್ನು ಜನರಿಗೆ ಬಹಿರಂಗಪಡಿಸಿ. ತದನಂತರ ನಿಮ್ಮ ಸರ್ಕಾರದ ಆರ್ಥಿಕ ಸಚಿವೆ ನಿರ್ಮಲ ಸೀತಾರಾಮನ್ ರವರನ್ನು ಎದುರಿಸುವುದನ್ನು ನಿಲ್ಲಿಸಿ. ದಯವಿಟ್ಟು ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಎಲ್ಲರಿಗೂ ತಿಳಿಸಿ ಕೊಡಿ, ತಪ್ಪು ಮಾಹಿತಿಗಳ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯಬೇಡಿ ಎಂದಿದ್ದಾರೆ. ಅಷ್ಟೇ ಅಲ್ಲದೆ ಮೋದಿ ಹಾಗೂ ನಿರ್ಮಲ ಸೀತಾರಾಮನ್ ರವರಿಗೆ ಸಲಹೆ ನೀಡಲು ಯಾರು ಇಲ್ಲವೋ ಅಥವಾ ಯಾರ ಸಲಹೆಯನ್ನು ಸ್ವೀಕರಿಸುತ್ತಿಲ್ಲವೋ ಎಂಬುದು ನನಗೆ ತಿಳಿದಿಲ್ಲ ಎಂದು ಮೋದಿ ವಿರುದ್ಧ ಮಾತನಾಡಿದ್ದಾರೆ. ಇತ್ತೀಚೆಗಷ್ಟೇ ನಿರ್ಮಲಾ ಸೀತಾರಾಮನ್ ರವರ ನಿರ್ಧಾರಗಳ ಬಗ್ಗೆಯೂ ಸಹ ಸುಬ್ರಮಣ್ಯಂ ಸ್ವಾಮಿ ಅವರು ಕಿಡಿಕಾರಿದ್ದರು.