ಹಿಂದುತ್ವ, ರಾಮ ಮಂದಿರದಿಂದ ದೇಶ ಕಟ್ಟಲು ಸಾಧ್ಯವೇ ಎಂದ ಸಿದ್ದುಗೆ ಸಿ.ಟಿ ರವಿ ಸರಿಯಾದ ಗುದ್ದು ನೀಡಿದ್ದು ಹೇಗೆ ಗೊತ್ತಾ??

ಹಿಂದುತ್ವ, ರಾಮ ಮಂದಿರದಿಂದ ದೇಶ ಕಟ್ಟಲು ಸಾಧ್ಯವೇ ಎಂದ ಸಿದ್ದುಗೆ ಸಿ.ಟಿ ರವಿ ಸರಿಯಾದ ಗುದ್ದು ನೀಡಿದ್ದು ಹೇಗೆ ಗೊತ್ತಾ??

ಸಿದ್ದರಾಮಯ್ಯ ರವರ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ತಾನೊಬ್ಬ ಅಹಿಂದ ಜನನಾಯಕ ಎಂದು ಹಲವಾರು ಬಾರಿ ತಮ್ಮ ನಡುವಳಿಕೆಗಳ ಮೂಲಕ ಹಾಗೂ ಹೇಳಿಕೆಗಳ ಮೂಲಕ ಬಾರಿ ವಿವಾದಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲಿಯೂ ಬಿಜೆಪಿ ಪಕ್ಷವನ್ನು ದೂಷಿಸುವ ಉದ್ದೇಶದಿಂದ ನೀಡಿದ ಹೇಳಿಕೆಗಳು ಹಾಗೂ ಅವರ ನಡುವಳಿಕೆಗಳು ಭಾರಿ ಸದ್ದು ಮಾಡಿವೆ. ಕುಂಕುಮ ಇಟ್ಟವರನ್ನು ಕಂಡರೆ ನನಗೆ ಭಯವಾಗುತ್ತದೆ, ಕುಂಕುಮ ವನ್ನು ನನಗೆ ಇಡಬೇಡಿ ಹಾಗೂ ಧರ್ಮಸ್ಥಳಕ್ಕೆ ಮೀನು ತಿಂದು ಹೋಗಿದ್ದು ಈ ವಿವಾದಗಳಲ್ಲಿ ಪ್ರಮುಖವಾದ್ದವು. ಇದೇ ರೀತಿ ಇತ್ತೀಚೆಗೆ ಬಿಜೆಪಿ ಪಕ್ಷವನ್ನು ದೂಷಿಸುವ ಉದ್ದೇಶದಿಂದ ಹಿಂದುತ್ವ ಮತ್ತು ರಾಮ ಮಂದಿರದಿಂದ ದೇಶ ಕಟ್ಟಲು ಸಾಧ್ಯವೇ ಎಂದು ಪ್ರಶ್ನೆ ಕೇಳುವ ಮೂಲಕ ಮತ್ತೊಮ್ಮೆ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೀಗ ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯದ ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಗಳಿಸಿರುವ ಪ್ರವಾಸೋದ್ಯಮ ಇಲಾಖೆ ಸಚಿವ ಸಿಟಿ ರವಿ ರವರು ತಕ್ಕ ತಿರುಗೇಟು ನೀಡಿದ್ದಾರೆ. ಹೌದು, ಸಿದ್ದರಾಮಯ್ಯ ರವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಟಿ ರವಿ ರವರು, ಸಿದ್ದರಾಮಯ್ಯ ರವರು ಜಾರಿಗೆ ತಂದಿದ್ದ ಯೋಜನೆಗಳಾದ ಶಾದಿಭಾಗ್ಯ ಹಾಗೂ ಕರ್ನಾಟಕ ರಾಜ್ಯದಲ್ಲಿ ಬಾರಿ ವಿವಾದ ಸೃಷ್ಟಿಸಿದ್ದ ಟಿಪ್ಪು ಜಯಂತಿಗಳನ್ನು ಪ್ರಸ್ತಾವನೆ ಮಾಡಿ, ಶಾದಿಭಾಗ್ಯ ಹಾಗೂ ಟಿಪ್ಪು ಜಯಂತಿ ಆಚರಣೆಯಿಂದ ದೇಶ ಕಟ್ಟಲು ಸಾಧ್ಯವೇ?? ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ. ಇದೀಗ ಸಿ.ಟಿ ರವಿ ರವರ ಈ ಖಡಕ್ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಸಿ.