HDK ಗೆ ಏಕವಚನದಲ್ಲಿ ಖಡಕ್ ಎಚ್ಚರಿಕೆ ನೀಡಿದ ಶ್ರೀ ರಾಮುಲು- ಭಾರಿ ವಾಗ್ದಾಳಿ ನಡೆಸಿ ಹೇಳಿದ್ದೇನು ಗೊತ್ತಾ??

HDK ಗೆ ಏಕವಚನದಲ್ಲಿ ಖಡಕ್ ಎಚ್ಚರಿಕೆ ನೀಡಿದ ಶ್ರೀ ರಾಮುಲು- ಭಾರಿ ವಾಗ್ದಾಳಿ ನಡೆಸಿ ಹೇಳಿದ್ದೇನು ಗೊತ್ತಾ??

ಮಾಜಿ ಮಖ್ಯಮಂತ್ರಿ ಹಾಗೂ ಇಂದಿನ ಚೆನ್ನಪಟ್ಟಣದ ಶಾಸಕರಾಗಿರುವ ಕುಮಾರಸ್ವಾಮಿ ರವರು, ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಪಕ್ಷದ ಹಿರಿಯ ನಾಯಕ ಹಾಗೂ ಮುಖ್ಯಮಂತ್ರಿ ಬಿ ಸ್ ಯಡಿಯೂರಪ್ಪನವರ ಬಗ್ಗೆ ಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ರಾಮನಗರದಲ್ಲಿ ಜೆಡಿಎಸ್ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಯಡಿಯೂರಪ್ಪ ನವರ ವೈಯಕ್ತಿಕ ವಿಚಾರವನ್ನು ಕೆದಕಿ ಪತ್ನಿ ಸಾವಿನ ವಿಚಾರ ತೆಗೆದು, ಯಡಿಯೂರಪ್ಪ ನವರ ಪತ್ನಿಯ ಸಾವು ಸಹಜವಲ್ಲ, ಒಂದಡಿಗೆ ಒಂದಡಿ ಇರುವ ನೀರಿನ ಟ್ಯಾಂಕ್ ನಲ್ಲಿ ಯಾರಾದರೂ ಕಾಲು ಜಾರಿ ಬಿದ್ದು ಸಾಯುವಂತದ್ದು ಉಂಟೇನ್ರಿ? ಅಂಥದ್ದೇ ಜನ ಮೆಚ್ಚಿಕೊಂಡಿದ್ದಾರೆ. ಆ ರೀತಿ ಮಾಡಿದವರಿಗೆ ಕಾಲ ಇದು. ಅವರು ಇದೀಗ ದೇಶ ಕಾಯುವವರು, ರಾಜ್ಯ ಕಾಯುವವರು ಎಂದು ಹೇಳಿಕೆ ನೀಡುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದರು.

ಸಾಮಾನ್ಯವಾಗಿಯೇ ಕುಮಾರಸ್ವಾಮಿ ರವರ ಈ ಹೇಳಿಕೆ ಬಿಜೆಪಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿತ್ತು. ಅದರಲ್ಲಿಯೂ ಸಾವಿನ ವಿಚಾರದಲ್ಲಿ ರಾಜಕೀಯ ಎಳೆದು ತಂದ ಕಾರಣ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದೀಗ ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶ್ರೀ ರಾಮುಲು ರವರು, ಕುಮಾರ ಸ್ವಾಮಿ ರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಗಳಾದ ಕುಮಾರಸ್ವಾಮಿಗೆ ಅಧಿಕಾರ ಕಳೆದುಕೊಂಡ ಕಾರಣ ಮತಿ ಭ್ರಮಣೆ ಯಾಗಿದೆ. ನೀವು ಒಬ್ಬ ಸಣ್ಣ ರಾಜಕಾರಣಿ, ನೀನೊಬ್ಬ ಹುಡುಗ, ಮಾಜಿ ಪ್ರಧಾನ ಮಂತ್ರಿಗಳ ಮಗ ಎಂಬ ಕಾರಣಕ್ಕೆ ಮುಖ್ಯಮಂತ್ರಿಯಾಗಿದ್ದೀಯ, ಯಡಿಯೂರಪ್ಪ ಹೋರಾಟ ಮಾಡಿ ಮುಖ್ಯಮಂತ್ರಿಯಾಗಿದ್ದಾರೆ. ನಿಮ್ಮ ತಂದೆ ಯವರಾದ ದೇವೇಗೌಡರಿಗೆ ಇರುವಷ್ಟು ಅನುಭವ ಯಡಿಯೂರಪ್ಪನವರಿಗೆ ಇದೆ. ಯಾವುದೇ ಕಾರಣಕ್ಕೂ ಕುಟುಂಬದವರನ್ನು ರಾಜಕೀಯಕ್ಕೆ ಎಳೆದು ತರಬೇಡಿ, ಅವರ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೇ ಎಂದು ಗುಡುಗಿದ್ದಾರೆ.