ರಾಜ್ಯದ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾದ ಸದಾನಂದಗೌಡ

ರಾಜ್ಯದ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾದ ಸದಾನಂದಗೌಡ

ಕೇಂದ್ರ ಸಚಿವ ಸದಾನಂದ ಗೌಡರವರು ಇದೀಗ ಕರ್ನಾಟಕ ರಾಜ್ಯದ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದ್ದಾರೆ. ತಾವು ಕಳೆದ ಬಾರಿ ಕೆಲವು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಕಾಲ ಯೋಜನೆಯ ಮೂಲಕ ಜಾರಿಗೆ ತಂದಿದ್ದ ಹಲವಾರು ಯೋಜನೆಗಳು ಜಾರಿಗೆ ಬರುವಲ್ಲಿ ವಿಫಲವಾಗಿದ್ದವು. ಬಿಜೆಪಿ ಪಕ್ಷದ ತದನಂತರ ಅಧಿಕಾರದ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್ ಪಕ್ಷವು ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೊಳಿಸಿದ ಸಕಾಲ ಯೋಜನೆಯ ಅಡಿಯಲ್ಲಿ ಇದ್ದ ಹಲವಾರು ಯೋಜನೆಗಳನ್ನು ಜಾರಿಗೊಳಿಸದೆ ಆರಂಭದಲ್ಲಿ ಅಂತ್ಯ ಕಂಡಿದ್ದವು. ಇದೀಗ ಕೇಂದ್ರ ಸಚಿವರಾದ ಮೇಲೆ ತಮ್ಮ ಕನಸಿನ ಯೋಜನೆಗಳನ್ನು ತೆರೆದಿಡಲು ಸದಾನಂದಗೌಡರು ನಿರ್ಧಾರ ಮಾಡಿರುವಂತೆ ಕಾಣುತ್ತಿದ್ದು, ಸಕಾಲ ಯೋಜನೆಯ ಅಡಿಯಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಆರಂಭವಾಗಬೇಕಾಗಿದ್ದ ಬೆಂಗಳೂರು ಒನ್ ಮಾದರಿ ಕೇಂದ್ರಗಳನ್ನು ರಾಜ್ಯದೆಲ್ಲೆಡೆ ವಿಸ್ತಾರ ಮಾಡಲು ಚಿಂತನೆ ಆರಂಭಿಸಿದ್ದಾರೆ.

ಇದೀಗ ರಾಜಧಾನಿ ಬೆಂಗಳೂರಿನಲ್ಲಿ, ಬೆಂಗಳೂರು ಒನ್ ಎಂಬ ಯೋಜನೆಯ ಅಡಿಯಲ್ಲಿ ಹಲವಾರು ಆಫೀಸ್ ಗಳನ್ನು ತೆರೆದು, ಸಾಮಾನ್ಯ ಜನರಿಗೆ ಒಂದೇ ಕಡೆ ಸರ್ಕಾರದ ಹಲವಾರು ಯೋಜನೆಗಳ ವಿವರ ಹಾಗೂ ವಿವಿಧ ಇಲಾಖೆಗಳ ಕಾರ್ಯಗಳನ್ನು ನಡೆಸಲು ಅನುವುಮಾಡಿಕೊಡಲಾಗಿದೆ. ವಿದ್ಯುತ್ ಬಿಲ್ ಕಟ್ಟುವ ಕಾರ್ಯದಿಂದ ಇಡಿದು, ಪ್ರಧಾನಿ ಮಂತ್ರಿಗಳ ಹಲವಾರು ಯೋಜನೆಗಳ ಕಾರ್ಯಗಳನ್ನು ಒಂದೇ ಆಫೀಸಿನಲ್ಲಿ ಮಾಡಬಹುದಾದ ಸೌಲಭ್ಯ ರಾಜಧಾನಿ ಬೆಂಗಳೂರಿನ ಜನರಿಗೆ ಇದೀಗ ಲಭ್ಯವಿದೆ. ಈ ಯೋಜನೆಯು ಹಲವಾರು ವರ್ಷಗಳ ಹಿಂದೆ ಜಾರಿಯಾದರೂ ಸಹ ಕೇವಲ ರಾಜಧಾನಿ ಬೆಂಗಳೂರಿಗಷ್ಟೇ ಸೀಮಿತವಾಗಿದೆ. ಇದೇ ಯೋಜನೆಯನ್ನು ಇದೀಗ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಜಾರಿಮಾಡಲು ಒಂದೇ ಸೂರಿನಡಿ ಹಲವು ಸೇವೆ ನೀಡುವ ಬೆಂಗಳೂರು ಒನ್ ಮಾದರಿಯ ಕೇಂದ್ರಗಳನ್ನು ತೆರೆಯಲು ಚಿಂತನೆ ನಡೆಸಲಾಗುವುದು, ಇದರಿಂದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.