ಡಿಕೆಶಿಗೆ ಭಾರಿ ಮುಜುಗರ- ಕಾರ್ ನಿಂದ ಕೆಳಗಿಳಿಸಿ ತರಾಟೆ ತೆಗೆದುಕೊಂಡ ರೈತರನ್ನು ಕಂಡು ವಾಪಸಾದ ಡಿಕೆಶಿ !!

ಡಿಕೆಶಿಗೆ ಭಾರಿ ಮುಜುಗರ- ಕಾರ್ ನಿಂದ ಕೆಳಗಿಳಿಸಿ ತರಾಟೆ ತೆಗೆದುಕೊಂಡ ರೈತರನ್ನು ಕಂಡು ವಾಪಸಾದ ಡಿಕೆಶಿ !!

ಇದೀಗ ಡಿಕೆ ಶಿವಕುಮಾರ್ ಅವರಿಗೆ ರೈತರು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಇಂಟರ್ನೆಟ್ನಲ್ಲಿ ಬಾರಿ ವೈರಲ್ ಆಗುತ್ತಿದೆ. ಇಂದು ಉತ್ತರ ಕರ್ನಾಟಕದ‌ ರೈತರ ಸಮಸ್ಯೆಗಳನ್ನು ಆಲಿಸಲು ಭೇಟಿ ನೀಡಿದ ಸಂದರ್ಭದಲ್ಲಿ, ನೆರೆದಿದ್ದ ರೈತರು ಡಿಕೆ ಶಿವಕುಮಾರ್ ಅವರ ಸಮೇತ ಹಲವಾರು ಶಾಸಕ ಹಾಗೂ ಪಕ್ಷದ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ದಿವಸ ಕೃಷ್ಣಾ ನದಿಯಲ್ಲಿ ನೀರಿಲ್ಲದೆ ಉತ್ತರ ಕರ್ನಾಟಕದ ಜನರು ತತ್ತರಿಸಿಹೋಗಿದ್ದಾರೆ, ಆ ಸಮಯದಲ್ಲಿ ನೀವು ಉತ್ತರ ಕರ್ನಾಟಕದ ಕಡೆ ತಲೆ ಹಾಕಲಿಲ್ಲ ಆದರೆ ಇದೀಗ ಮಹಾರಾಷ್ಟ್ರ ರಾಜ್ಯವು ಉತ್ತರ ಕರ್ನಾಟಕ ಜನರ ಸಂಕಷ್ಟವನ್ನು ನೋಡಿ ನೀರು ಹರಿಸಿದ ಮೇಲೆ ನೀವು ಯಾಕೆ ಬಂದಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಪೂರ್ಣ ವಿಡಿಯೋ ಕೆಳಗಡೆ ಇದೆ ನೀವೇ ನೋಡಿ.

ಇನ್ನು ಕಾವೇರಿ ವಿವಾದವನ್ನು ತೆಗೆದು ಮಾತನಾಡಿರುವ ಉತ್ತರ ಕರ್ನಾಟಕದ ರೈತ ಕಾವೇರಿ ಸಮಸ್ಯೆ ಬಂದಾಗ ನಾವು ಸಂಪೂರ್ಣವಾದ ಬೆಂಬಲದೊಂದಿಗೆ ಹೋರಾಟ ಮಾಡುತ್ತೇವೆ. ಆದರೆ ಉತ್ತರ ಕರ್ನಾಟಕ ಎಂದ ತಕ್ಷಣ ನಮ್ಮನ್ನು ಸಂಪೂರ್ಣ ಅಲಕ್ಷ ಮಾಡುತ್ತಾರೆ. ಕೃಷ್ಣಾ ನದಿಯ ಬಗ್ಗೆ ಯಾರೊಬ್ಬರು ಧ್ವನಿ ಎತ್ತುವುದಿಲ್ಲ, ಯಾರೊಬ್ಬರೂ ನಮ್ಮ ಹೋರಾಟಕ್ಕೆ ಕೈಜೋಡಿಸುವುದಿಲ್ಲ ಎಂದು ಅಳಲು ತೋಡಿಕೊಂಡು ಡಿಕೆ ಶಿವಕುಮಾರ್ ಅವರಿಗೆ ತಮ್ಮ ಸಮಸ್ಯೆಗಳನ್ನು ಮನದಟ್ಟು ಮಾಡಿ ಕೊಟ್ಟಿದ್ದಾರೆ. ಇದೇ ಸಮಯದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು, ಸಮಸ್ಯೆಯನ್ನು ಇದೀಗ ನಮ್ಮ ಗಮನಕ್ಕೆ ಪರಿಹಾರ ಆದಷ್ಟು ಬೇಗ ನೀಡಲಾಗುತ್ತದೆ ಎಂದು ಭರವಸೆ ನೀಡಿದ ನಂತರ ಡಿ ಕೆ ಶಿವಕುಮಾರ್ ಅವರು ಬಂದ ದಾರಿಗೆ ಸುಂಕವಿಲ್ಲ ಎಂದು ಕಾರು ಹತ್ತಿ ವಾಪಸಾಗಿದ್ದಾರೆ.