ಡಿಕೆಶಿಗೆ ಸರಿಯಾದ ಗುದ್ದು ನೀಡಿದ ಸಿದ್ದರಾಮಯ್ಯ!? ಮತ್ತೊಮ್ಮೆ ಗೆದ್ದು ಬೀಗಿದ ಸಿದ್ದು

ಡಿಕೆಶಿಗೆ ಸರಿಯಾದ ಗುದ್ದು ನೀಡಿದ ಸಿದ್ದರಾಮಯ್ಯ!? ಮತ್ತೊಮ್ಮೆ ಗೆದ್ದು ಬೀಗಿದ ಸಿದ್ದು

ಕರ್ನಾಟಕ ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯರವರ ಹವಾ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಕೆಲವು ವರ್ಷಗಳ ಹಿಂದೆ ಜೆಡಿಎಸ್ ಪಕ್ಷದಿಂದ ವಲಸೆ ಹೋಗಿ, ಎಲ್ಲಾ ಕಾಂಗ್ರೆಸ್ ನಾಯಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಕೆಲವೇ ವರ್ಷಗಳಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇನ್ನು ಹೈಕಮಾಂಡ್ ವಿಷಯಕ್ಕೆ ಬಂದರೇ ಸಿದ್ದರಾಮಯ್ಯರವರು ಹೇಳಿದ ಮೇಲೆ ಮುಗಿಯಿತು ಎಂಬ ಮಾತುಗಳು ಇವೆ. ರಾಹುಲ್ ಗಾಂಧಿ ರವರು ಸಿದ್ದರಾಮಯ್ಯರವರ ಮಾತನ್ನು ಮೀರಿ ಯಾವುದೇ ನಿರ್ಣಯವನ್ನು ಕರ್ನಾಟಕ ರಾಜ್ಯದಲ್ಲಿ ತೆಗೆದುಕೊಳ್ಳುವುದಿಲ್ಲ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿವೆ. ಇದೀಗ ಈ ಮಾತುಗಳಿಗೆ ಮತ್ತಷ್ಟು ಪೂರಕ ಎಂಬಂತೆ ಡಿಕೆಶಿವಕುಮಾರ್ ಅವರ ಮುಂದೆ ಮತ್ತೊಮ್ಮೆ ಗೆದ್ದಿದ್ದಾರೆ.

ಡಿಕೆ ಶಿವಕುಮಾರ್ ಅವರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ ಕಾರಣ, ಪಕ್ಷದ ಸಂಘಟನೆಯನ್ನು ಮನದಲ್ಲಿಟ್ಟುಕೊಂಡು ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಲಾಗುತ್ತದೆ ಎಂಬ ಮಾತುಗಳು ದೆಹಲಿಯಲ್ಲಿ ಕೇಳಿಬರುತ್ತಿದ್ದವು. ಆದರೆ ಕೊನೆ ಕ್ಷಣದಲ್ಲಿ ಅಖಾಡಕ್ಕಿಳಿದ ಸಿದ್ದರಾಮಯ್ಯರವರು, ಇಡೀ ಕೆಪಿಸಿಸಿ ಸಂಘಟನೆಯನ್ನು ವಿಸರ್ಜನೆ ಮಾಡಿದರೂ ಸಹ ಡಿಕೆ ಶಿವಕುಮಾರ್ ಅವರಿಗೆ ಯಾವುದೇ ಸ್ಥಾನಮಾನವನ್ನು ನೀಡದಂತೆ ತಡೆಯಲು ಯಶಸ್ವಿಯಾಗಿದ್ದಾರೆ. ಡಿಕೆ ಶಿವಕುಮಾರ್ ರವರು ಒಂದು ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮಟ್ಟಕ್ಕೆ ಏರಿದರೆ, ಸಿದ್ದರಾಮಯ್ಯರವರ ವಿರುದ್ಧದ ಕಾಂಗ್ರೆಸ್ ಪಕ್ಷದ ಬಣ್ಣ ಬಲಿಷ್ಠವಾಗುತ್ತದೆ ಎಂದು ಸಿದ್ದರಾಮಯ್ಯ ಅವರು ನಂಬಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಅಧ್ಯಕ್ಷ ಸ್ಥಾನದ ಆಸೆಯಲ್ಲಿದ್ದ ಡಿಕೆ ಶಿವಕುಮಾರ್ ಅವರಿಗೆ ಮತ್ತೊಮ್ಮೆ ಹೈಕಮಾಂಡ್ ಸಿಹಿಸುದ್ದಿ ನೀಡುವಲ್ಲಿ ವಿಫಲವಾಗಿದೆ.