ವಿಶೇಷ ರೀತಿಯಲ್ಲಿ ಮನವಿ ಮಾಡಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡ ಸುರೇಶ ಅಂಗಡಿ

ವಿಶೇಷ ರೀತಿಯಲ್ಲಿ ಮನವಿ ಮಾಡಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡ ಸುರೇಶ ಅಂಗಡಿ

ಕೆಲವೇ ಕೆಲವು ದಿನಗಳ ಹಿಂದಷ್ಟೇ ಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ದಾಖಲಿಸಿ ಇದೀಗ ಮೋದಿ ಟೀಮ್ ನಲ್ಲಿ ಸ್ಥಾನ ಪಡೆದುಕೊಂಡಿರುವ ಸಂಸದ ಸುರೇಶ ಅಂಗಡಿ ರವರು ಮತ್ತೊಮ್ಮೆ ತಮ್ಮ ಸಾಮಾಜಿಕ ಕಳಕಳಿಯ ಮೂಲಕ ಸುದ್ದಿಯಾಗಿದ್ದಾರೆ. ಹೌದು ತಾವು ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಿ, ಮೋದಿ ಟೀಮ್ ನಲ್ಲಿ ಕೇಂದ್ರ ಮಂತ್ರಿಯಾಗಿ ಸ್ಥಾನ ಪಡೆದುಕೊಂಡ ಬಳಿಕ ಮೊದಲ ಹುಟ್ಟುಹಬ್ಬದ ಸಂತೋಷದಲ್ಲಿರುವ ಸುರೇಶ ಅಂಗಡಿ ರವರು ತಮ್ಮನ್ನು ಅಭಿನಂದಿಸಲು ಬರುವ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ವಿಶೇಷ ರೀತಿಯಲ್ಲಿ ಮನವಿ ಮಾಡಿಕೊಂಡು ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

ತನ್ನನ್ನು ಅಭಿನಂದಿಸಲು ಬರುವ ಯಾವುದೇ ಪಕ್ಷದ ಮುಖಂಡರಾಗಲಿ, ಬಿಜೆಪಿ ಪಕ್ಷದ ಕಾರ್ಯಕರ್ತರಾಗಲಿ ಅಥವಾ ಸಾರ್ವಜನಿಕರೇ ಆಗಲಿ ದಯವಿಟ್ಟು ಹೂಗುಚ್ಚ ಅಥವಾ ಇನ್ನಿತರ ರೀತಿಯ ಉಡುಗೊರೆಯನ್ನು ತರಬೇಡಿ. ಬದಲಾಗಿ ಮಕ್ಕಳಿಗೆ ಉಪಯೋಗವಾಗುವಂತಹ ನೋಟ್ ಪುಸ್ತಕವನ್ನು ತಂದು ನನಗೆ ನೀಡಿ, ನಾನು ನಿಮ್ಮೆಲ್ಲರ ನೋಟ್ ಪುಸ್ತಕಗಳನ್ನು ಒಟ್ಟು ಮಾಡಿ ಅವಶ್ಯಕತೆ ಇರುವ ಶಾಲೆಗಳಲ್ಲಿ ವಿತರಿಸುವ ಮೂಲಕ ಮಕ್ಕಳ ನಗುವಿನಲ್ಲಿ ಆರ್ಶಿವಾದ ಪಡೆಯುತ್ತೇನೆ ಎಂದು ಮನವಿ ಮಾಡಿಕೊಂಡರು. ಇತ್ತೀಚೆಗೆ ಸದಾನಂದ ಗೌಡ ರವರು ಸಹ ಹೂ ಗುಚ್ಛದ ಬದಲಾಗಿ ಗಿಡವನ್ನು ನೀಡಿ ಎಂದು ಮನವಿ ಮಾಡಿದ್ದರು. ಒಟ್ಟಿನಲ್ಲಿ ಈ ರೀತಿಯ ಪರಿಸರಸ್ನೇಹಿ ಆಚರಣೆಗಳನ್ನು ಎಲ್ಲರೂ ಪಾಲಿಸಿದರೆ ಬಡ ಮಕ್ಕಳಿಗೆ ಉಚಿತ ಪುಸ್ತಕ ದೊರೆಯುವುದಷ್ಟೇ ಅಲ್ಲದೇ ಕರ್ನಾಟಕ ಹಸಿರುಮಯವಾಗುತ್ತದೆ.