ಮೋದಿಯೇ ಪ್ರಧಾನಿಯಾಗುತ್ತಾರೆ ಎಂದು ಕೊಂಡು ಮನವಿ ಮುಂದಿಟ್ಟ ಸೂಪರ್ ಸ್ಟಾರ್

ಮೋದಿಯೇ ಪ್ರಧಾನಿಯಾಗುತ್ತಾರೆ ಎಂದು ಕೊಂಡು ಮನವಿ ಮುಂದಿಟ್ಟ ಸೂಪರ್ ಸ್ಟಾರ್

ಬಿಜೆಪಿ ಪಕ್ಷದ ಪ್ರಣಾಳಿಕೆ ದೇಶದಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ದೇಶದ ಭದ್ರತೆಗಳಿಗೆ ಸಂಬಂಧಿಸಿದಂತೆ ಹಲವಾರು ವಿವಾದಗಳು ಕೇಳಿಬಂದಿದ್ದವು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ವಿರುದ್ಧ ಭಾರತೀಯ ಸೈನಿಕ ಸಹ ಅಸಮಾಧಾನವನ್ನು ಹೊರ ಹಾಕಿತ್ತು. ಕಾಶ್ಮೀರದಲ್ಲಿ ಸೇನೆಯ ಹಿಂಪಡೆಯುವಿಕೆ ವಿಷಯದ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧ ಭಾರತೀಯ ಸೇನೆಯು ಸಹ ತಕರಾರು ತೆಗೆದು ದೇಶದ ಭದ್ರತೆಯ ವಿಷಯದಲ್ಲಿ ಯಾರು ಈ ರೀತಿಯ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಮನವಿ ಮಾಡಿಕೊಂಡು ಹಾಗೂ ಮತ್ತೊಮ್ಮೆ ಪ್ರಣಾಳಿಕೆಯನ್ನು ಪರಿಶೀಲಿಸುವಂತೆ ಮನವಿ ಮಾಡಿಕೊಂಡಿತ್ತು.

ಆದರೆ ಕಾಂಗ್ರೆಸ್ ಪಕ್ಷಕ್ಕೆ ಭಾರತೀಯ ಸೇನೆಯ ಮನವಿಗೆ ಯಾವುದೇ ಬೆಲೆಯನ್ನು ನೀಡಿರಲಿಲ್ಲ, ಆದರೆ ಇದೀಗ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಸೇನೆಯ ಬಲವನ್ನು ಮತ್ತಷ್ಟು ಹೆಚ್ಚಿಸುವುದಾಗಿ ಘೋಷಿಸಿರುವ ನರೇಂದ್ರ ಮೋದಿ ಅವರ ಬೆಂಬಲಕ್ಕೆ ಈಗಾಗಲೇ ಹಲವಾರು ಶ್ಲಾಘನೆಗಳು ಕೇಳಿ ಬಂದಿವೆ. ಇದೀಗ ಬಿಜೆಪಿ ಪ್ರಣಾಳಿಕೆ ಯ ಮತ್ತೊಂದು ಅಂಶ ವೈರಲ್ ಆಗಿದ್ದು ಲೋಕಸಭಾ ಚುನಾವಣೆಯಿಂದ ದೂರ ಉಳಿಯುವುದಾಗಿ ಹೇಳಿಕೆ ನೀಡಿದ್ದ ರಜನಿಕಾಂತ್ ಇದೀಗ ಬಿಜೆಪಿ ಪಕ್ಷದ ಪರ ಪರೋಕ್ಷವಾಗಿ ಬೆಂಬಲ ಘೋಷಿಸಿದಂತೆ ಕಾಣುತ್ತಿದೆ. ಯಾಕೆಂದರೆ ಈಗಾಗಲೇ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ರಜನಿಕಾಂತ್ ಅವರು ನಂಬಿದ್ದಾರೆ.

ಮುಂದಿನ ಲೋಖಾಸಭಾ ಚುನಾವಣೆಯಿಂದ ದೂರ ಉಳಿಯುವುದಾಗಿ ಈಗಲೇ ಘೋಷಿಸಿಕೊಂಡಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ  ಬಿಜೆಪಿ ಪಕ್ಷವು ಮುಂದಿನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಹಲವಾರು ನದಿಗಳ ಜೋಡಣೆ ಮಾಡುವುದಾಗಿ ಘೋಷಿಸಿದೆ, ಈ ರೀತಿಯ ಕೆಲಸ ನಿಜವಾಗಲೂ ಉಪಯುಕ್ತವಾಗಿರುತ್ತದೆ. ಆದ ಕಾರಣ ನೀವು ಅಧಿಕಾರಕ್ಕೆ ಬಂದ ತಕ್ಷಣ ಪ್ರಣಾಳಿಕೆಯಲ್ಲಿ ಹೇಳಿದಂತೆ ನದಿಗಳ ಜೋಡಣೆ ಯನ್ನು ಕೈಗೆತ್ತಿಕೊಳ್ಳಬೇಕು ಎಂದು ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ನರೇಂದ್ರ ಮೋದಿರವರು ಈ ಯೋಜನೆಯ ಮೂಲಕ ದೇಶದಲ್ಲಿರುವ ಬಡತನವನ್ನು ನಿರ್ಮೂಲನೆ ಮಾಡಲು ಹೊರಟಿದ್ದಾರೆ, ಇದರಿಂದ ಕೋಟ್ಯಂತರ ಜನರು ಉದ್ಯೋಗಿಗಳಾಗಲಿದ್ದಾರೆ,modi  ರೈತರ ಜೀವನ ಮತ್ತಷ್ಟು ಸುಧಾರಿಸಲಿದೆ. ಆದ ಕಾರಣ ದಯವಿಟ್ಟು ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಕೂಡಲೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇದೀಗ ರಜನಿಕಾಂತ್ ರವರ ಹೇಳಿಕೆ ಇಂಟರ್ನೆಟ್ ನಲ್ಲಿ ತಲ್ಲಣವನ್ನು ಸೃಷ್ಟಿಸಿದ್ದು, ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಆದ ಕಾರಣದಿಂದಲೇ ರಜನಿಕಾಂತ್ ರವರು ಈ ಹೇಳಿಕೆ ನೀಡುತ್ತಿದ್ದಾರೆ ನಿಮ್ಮ ಅನಿಸಿಕೆಗಳು ಕೇಳಿ ಬಂದಿವೆ.