ಬಿಗ್ ನ್ಯೂಸ್: ಸುಮಲತಾ ಗೆ ಬೆಂಬಲ ಘೋಷಿಸಿದ ಮಹಾರಾಜರು !! ಕಾರಣವೇನು ಗೊತ್ತಾ??

ಬಿಗ್ ನ್ಯೂಸ್: ಸುಮಲತಾ ಗೆ ಬೆಂಬಲ ಘೋಷಿಸಿದ ಮಹಾರಾಜರು !! ಕಾರಣವೇನು ಗೊತ್ತಾ??

ಮಂಡ್ಯ ಜಿಲ್ಲೆಯು ಕರ್ನಾಟಕದ ಹೈ ವೋಲ್ಟೇಜ್  ಕ್ಷೇತ್ರಗಳಲ್ಲಿ ಒಂದಾಗಿರುವದರಲ್ಲಿ ಅನುಮಾನವೇ ಇಲ್ಲ, ಯಾಕೆಂದರೆ ಮುಖ್ಯಮಂತ್ರಿಗಳ ಪುತ್ರನಾಗಿರುವ ನಿಖಿಲ್ ಕುಮಾರಸ್ವಾಮಿ ಅವರು ಇದೇ ಮೊಟ್ಟಮೊದಲ ಬಾರಿಗೆ ಚುನಾವಣೆಯನ್ನು ಎದುರಿಸುತ್ತಿರುವ ಕಾರಣ, ಹಾಗೂ ನಿಖಿಲ್ ಕುಮಾರಸ್ವಾಮಿ ರವರಿಗೆ ಸೋಲನ್ನು ತೋರಿಸುವಂತೆ ಮುನ್ನುಗ್ಗುತ್ತಿರುವ ಸುಮಲತಾ ರವರ ಸ್ಪರ್ಧೆ. ದೋಸ್ತಿಗಳು ಮೈತ್ರಿಯನ್ನು ಮಾಡಿಕೊಂಡು ಕಣಕ್ಕಿಳಿದರು ಸಹ ಸುಮಲತಾ ರವರ ಅಲೆ ಮುಂದೆ ಅಕ್ಷರಸಹ ನಿಖಿಲ್ ಕುಮಾರಸ್ವಾಮಿ ರವರು ದಂಗಾಗಿ ಹೋಗಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಕರ್ನಾಟಕದ ಮುಖ್ಯಮಂತ್ರಿಗಳು ಆಗಿರುವ ಕುಮಾರಸ್ವಾಮಿ ರವರು ಇನ್ನಿಲ್ಲದ ತಂತ್ರಗಳನ್ನು ಹೆಣೆದು ಸುಮಲತಾ ಅಂಬರೀಶ್ ಅವರನ್ನು ಕಟ್ಟಿಹಾಕಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ಇಲ್ಲಿಯವರೆಗೂ ಕುಮಾರಸ್ವಾಮಿರವರ ಯಾವುದೇ ತಂತ್ರಗಳು ಸಹ ಫಲ ಕೊಟ್ಟಂತೆ ಕಾಣುತ್ತಿಲ್ಲ, ಯಾಕೆಂದರೆ ಸುಮಲತಾ ರವರ ಬೆಂಬಲಕ್ಕೆ ಹಲವಾರು ನಾಯಕರು ಹಾಗೂ ಸಾಮಾನ್ಯ ಜನರು ಬೆಂಬಲ ಘೋಷಿಸಿ ಈಗಾಗಲೇ ಮಾಧ್ಯಮಗಳಲ್ಲಿ ಭಾರೀ ಹವಾ ಸೃಷ್ಟಿಸಿ ಗೆಲುವು ದಾಖಲಿಸುವ ಎಲ್ಲಾ ಸೂಚನೆಯನ್ನು ನೀಡಿದ್ದಾರೆ.

ಇನ್ನು ಸುಮಲತಾ ರವರು ಬೆಂಬಲ ವರ್ಗದ ಪಟ್ಟಿಗೆ ಇಂದು ಮೈಸೂರು ರಾಜವಂಶಸ್ಥ ಯದುವೀರ್ ಅವರು ಸೇರಿಕೊಂಡಿದ್ದಾರೆ. ಕನ್ನಡಿಗರ ಅಚ್ಚುಮೆಚ್ಚಿನ ಯುವರಾಜ ರಾಗಿರುವ ಯದುವೀರ್ ಅವರು ರಾಜಕೀಯದಿಂದ ದೂರ ಉಳಿಯಲು ಇಚ್ಚಿಸುತ್ತಾರೆ, ಆದರೂ ಸಹ ಇದೀಗ ಸುಮಲತಾ ರವರ ಬೆಂಬಲಕ್ಕೆ ನಿಂತಿರುವ ಯದುವೀರ್ ಅವರು ಕಾರಣಗಳ ಸಮೇತ ಸುಮಲತಾ ರವರನ್ನು ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಅಷ್ಟಕ್ಕೂ ಕಾರಣವೇನು ಹಾಗೂ ಯಾವ ರೀತಿಯ ಬೆಂಬಲ ನೀಡುತ್ತಾರೆ ಗೊತ್ತಾ??

ಅಂಬರೀಶ್ ರವರ ಬಗ್ಗೆ ಮಾತನಾಡಿರುವ ಯದುವೀರ್ ಅವರು ಅಂಬರೀಶ್ ಹಾಗೂ ನಮ್ಮ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ರವರು 35 ವರ್ಷಗಳ ಕಾಲ ಬಹಳ ಒಳ್ಳೆಯ ಸ್ನೇಹಿತರಾಗಿದ್ದರು. ಅಂಬರೀಶ್ ಅವರಿಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ, ಅಷ್ಟೇ ಅಲ್ಲದೆ ಅರಮನೆಯ ಕಷ್ಟದ ಸಂದರ್ಭದಲ್ಲಿ ನಮ್ಮ ಬೆನ್ನೆಲುಬಾಗಿ ನಿಂತಿದ್ದರು, ಅಂಬರೀಶ್ ರವರ ಸಹಾಯವನ್ನು ನಾವು ಮರೆಯಲು ಸಾಧ್ಯವಿಲ್ಲ. ಮೈಸೂರು ರಾಜಮನೆತನ ಸದಾ ಅಂಬರೀಶ್ ರವರಿಗೆ ಕೃತಜ್ಞಾಗಿರುತ್ತದೆ. ನಾನು ಕಾರಣಾಂತಗಳಿಂದ ಬಹಿರಂಗ ಪ್ರಚಾರಕ್ಕೆ ಹೋಗುವುದು ಸಾಧ್ಯವಿಲ್ಲ, ಆದರೆ ಸುಮಲತಾ ರವರಿಗೆ ಸಂಪೂರ್ಣ ನನ್ನ ಬೆಂಬಲವಿದೆ ಮಂಡ್ಯದ ಜನರಿಗೆ ಎಲ್ಲವೂ ತಿಳಿದಿದೆ ಅವರ ಮುಂದಿನ ದಿನಗಳಲ್ಲಿ ತಕ್ಕ ಉತ್ತರವನ್ನು ಎದುರಾಳಿಗಳಿಗೆ ನೀಡಲಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.