ಅಭಿನಂದನ್ ರವರ ಪಕ್ಕೆಲಬು ಹಾಗೂ ಬೆನ್ನೆಲುಬು ಮುರಿತ, ಖಚಿತ ಪಡಿಸಿದ ವೈದ್ಯರು ಒಮ್ಮೆ ಓದಿ

ಅಭಿನಂದನ್ ರವರ ಪಕ್ಕೆಲಬು ಹಾಗೂ ಬೆನ್ನೆಲುಬು ಮುರಿತ, ಖಚಿತ ಪಡಿಸಿದ ವೈದ್ಯರು ಒಮ್ಮೆ ಓದಿ

ಭಾರತದ ವಾಯು ಪಡೆಯ ಹೆಮ್ಮೆಯ ಹೀರೋ ಅಭಿನಂದನ್ ರವರ ಆರೋಗ್ಯ ತಪಾಸಣೆ ಮುಂದುವರೆದಿದೆ. ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿ ಮಿಲಿಟರಿ ಆಸ್ಪತ್ರೆಯಲ್ಲಿ ವಾಯು ಪಡೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅಭಿ ನಂದನ್ ಅವರನ್ನು ಹಲವಾರು ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದರು. ಆರೋಗ್ಯ ತಪಾಸಣೆಯ ವೇಳೆ ಯಲ್ಲಿ ಶಾಕಿಂಗ್ ವರದಿಯೊಂದು ಹೊರಬಿದ್ದಿದೆ. ಪಾಕಿಸ್ತಾನದ ಗಡಿಯಲ್ಲಿ ಪ್ಯಾರಾಚೂಟ್ ನಿಂದ ಇಳಿಯುವಾಗ ಹಾಗೂ ಸ್ಥಳೀಯರು ದಾಳಿ ಮಾಡಿದಾಗ ಅಭಿನಂದನ್  ದೈಹಿಕವಾಗಿ ಹಲವಾರು ಗಾಯಗಳಾಗಿವೆ.

ಇನ್ನು ಎಂ ಆರ್ ಐ ಸ್ಕ್ಯಾನ್ ನಿಂದ ಬಹಿರಂಗ ಕೊಂಡಿರುವ ಅಂಶವೇನೆಂದರೆ ಅಭಿನಂದನ್ ರವರ ಪಕ್ಕೆಲಬು ಹಾಗೂ ಬೆನ್ನೆಲುಬು ಮುರಿದಿದೆ. ಅಭಿನಂದನ್ ಅತ್ಯುತ್ತಮ ಟ್ರೈನಿಂಗ್ ಪಡೆದಿರುವ ಕಾರಣ ದೈಹಿಕ ಶಕ್ತಿ ಬಹಳ ಉತ್ತಮವಾಗಿದ್ದು ಕೆಲವೇ ದಿನಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇನ್ನು 2 ವಾರಗಳ ಕಾಲ ತೆಗೆದುಕೊಳ್ಳುತ್ತದೆ ಎಂಬುದನ್ನು ಅರಿತ ಅಭಿನಂದನ್ ನಾನು ಬಹುಬೇಗ ಭಾರತೀಯ ಸೇನೆಗೆ ಸೇರಿಕೊಳ್ಳಲು ಬಯಸುತ್ತೇನೆ, ನಾನು ಮತ್ತೊಮ್ಮೆ ವಿಮಾನದಲ್ಲಿ ಹಾರಾಟ ಮಾಡಬೇಕು ಎಂದು ಹೇಳುತ್ತಿದ್ದಾರೆ.  ಅಭಿನಂದನ್ ರವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ.