ಕೊನೆಗೂ ನೌಕಾ ಪಡೆಯನ್ನು ಅಖಾಡಕ್ಕೆ ಇಳಿಸಿದ ಮೋದಿ: ಬೆನ್ನಿಗೆ ಚೂರಿ ಹಾಕಲು ಹೊರಟ ಪಾಕ್ ಗೆ ಶಾಕ್ !!

ಭಾರತ ಹಾಗು ಪಾಕಿಸ್ತಾನದ ಗಡಿಯಲ್ಲಿ ಇನ್ನೇನು ಯುದ್ಧ ನಡೆದೇ ಹೋಗುತ್ತದೆ ಎಂಬ ಪರಿಸ್ಥಿತಿ ಉಂಟಾದಾಗ ಪಾಕಿಸ್ತಾನದ ಅಧ್ಯಕ್ಷರಾಗಿರುವ ಇಮ್ರಾನ್ ಖಾನ್ ರವರು ಇದ್ದಕ್ಕಿದ್ದಂತೆ ಮಾಧ್ಯಮಗಳ ಮುಂದೆ ಬಂದು ಭಾರತದ ವಿರುದ್ಧ ಶಾಂತಿ ಮಾತುಕತೆಗಾಗಿ ಬೇಡಿಕೆ ಇಟ್ಟಿದ್ದರು. ಇದಾದ ನಂತರ ಯುದ್ಧದ ವಾತಾವರಣ ಸ್ವಲ್ಪ ಕಡಿಮೆಯಾದಂತೆ ಕಾಣುತ್ತಿತ್ತು ಆದರೆ ಕೆಲವು ವಿದ್ಯಮಾನಗಳನ್ನು ನೋಡಿದರೆ ಇದು ಇಲ್ಲಿಗೆ ಮುಗಿ ಯುವಂತೆ ಕಾಣುತ್ತಿಲ್ಲ.

ಭಾರತದ ಮುಂದೆ ಶಾಂತಿಗಾಗಿ ಭಿಕ್ಷೆ ಬೇಡಿದ ಪಾಕಿಸ್ತಾನದ ಅಧ್ಯಕ್ಷ ಇಮ್ರಾನ್ ಖಾನ್ ರವರು ತಮ್ಮ ಕುತಂತ್ರ ನೀತಿಯನ್ನು ತೋರಿಸಲು ಹೊರಟಂತೆ ಕಾಣುತ್ತದೆ. ಮೊದಲು ಭಾರತೀಯರನ್ನು ಶಾಂತಿ ಮಾತುಕತೆಗೆ ಒಪ್ಪಿಸಿ ತದನಂತರ ಬೆನ್ನಿಗೆ ಚೂರಿ ಹಾಕುವ ಕೆಲಸ ಪಾಕಿಸ್ತಾನ ಮಾಡಲಿದೆ ಎಂಬ ಅನುಮಾನ ಎಲ್ಲರಲ್ಲೂ ವ್ಯಕ್ತವಾಗಿದೆ ಅದಕ್ಕೆ ಕಾರಣವೇನೆಂದರೆ ಶಾಂತಿ ಮಾತುಕತೆಯ ವಿಡಿಯೋದ ತದನಂತರ ಇಮ್ರಾನ್ ಖಾನ್ ರವರು ಅಣ್ವಸ್ತ್ರ ನಿಯಂತ್ರಣ ಸಂಸ್ಥೆಯ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಈ ವಿಷಯ ತಿಳಿದ ನರೇಂದ್ರ ಮೋದಿರವರು ಪಾಕಿಸ್ತಾನದ ಕುತಂತ್ರ ನೀತಿಯನ್ನು ತಡೆಯಲು ಹೊಸ ತಂತ್ರವನ್ನು ರೂಪಿಸಲು ಸಭೆ ಕರೆದಿದ್ದರು. ತುರ್ತು ಸಭೆಯಲ್ಲಿ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಾಜನಾಥ ಸಿಂಗ್ ಹಾಗೂ ರಕ್ಷಣಾ ಸಲಹೆಗಾರರು ಆಗಿರುವ ಅಜಿತ್ ದೋವೆಲ್ ರವರು ಭಾಗವಹಿಸಿದ್ದರು. ಪಾಕಿಸ್ತಾನದ ಪ್ರತಿಯೊಂದು ಕುತಂತ್ರ ನೀತಿಯನ್ನು ತಡೆಗಟ್ಟುವ ಮಹತ್ವದ ಚರ್ಚೆ ಇದಾಗಿತ್ತು.

ಇಮ್ರಾನ್ ಖಾನ್ ರವರು ಅಣ್ವಸ್ತ್ರ ಸಂಸ್ಥೆಯ ಜೊತೆ ಮುಂದೆ ನಡೆಯಬಹುದಾದ ಪರಿಸ್ಥಿತಿಗಳನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ನರೇಂದ್ರ ಮೋದಿರವರು ಮತ್ತೊಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿರುವ ಕಾರಣ ಪಾಕಿಸ್ತಾನವು ಕುತಂತ್ರ ನೀತಿಯನ್ನು ಅನುಸರಿಸಿದ ಮರುಕ್ಷಣ ಅಂತ್ಯವಾಗುವುದು ಖಚಿತ. ಈಗಾಗಲೇ ಭಾರತೀಯ ಸೇನೆಯ ತಾಕತ್ತು ತಿಳಿದಿರುವ ಪಾಕಿಸ್ತಾನ ಇಷ್ಟಾದರೂ ಕುತಂತ್ರ ಬುದ್ದಿ ಯನ್ನು ಬಿಡಲು ಮಾತ್ರ ತಯಾರಿಲ್ಲ.

ಸಭೆಯ ಸಭೆಯ ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ !

ಭಾರತೀಯ ವೀರ ಪೈಲೆಟ್ ಪಾಕಿಸ್ತಾನದ ಸೇನೆಯಲ್ಲಿ ಸಿಲುಕಿಕೊಂಡಿರುವ ಕಾರಣ ನರೇಂದ್ರ ಮೋದಿರವರು ಎಚ್ಚರಿಕೆ ಹೆಜ್ಜೆಯನ್ನು ಇಟ್ಟಿದ್ದಾರೆ. ಮೊದಲು ಪಾಕಿಸ್ತಾನದಿಂದ ಪೈಲೆಟನ್ನು ಬಿಡುಗಡೆ ಮಾಡಿಸುವ ಕೆಲಸಕ್ಕೆ ಆದ್ಯತೆ ನೀಡುವಂತೆ ರಕ್ಷಣಾ ಸಚಿವೆ ಹಾಗೂ ಅಜಿತ್ ದೋವಲ್ ಅವರಿಗೆ ಸೂಚಿಸಿದ್ದಾರೆ. ಮೊದಲು ಅಭಿನಂದನ್ ರವರನ್ನು ಬಿಡುಗಡೆ ಮುಕ್ತ ಮಾಡುವ ಕಾರ್ಯಕ್ಕೆ ಒತ್ತು ನೀಡಬೇಕು ಎಂದು ನರೇಂದ್ರ ಮೋದಿ ಅವರು ಸೂಚಿಸಿದ್ದಾರೆ. ಈ ಸಭೆಯು ಬಹಳ ಮಹತ್ವವನ್ನು ಪಡೆದು ಕೊಂಡಿರುವ ಕಾರಣ ಇಡೀ ದೇಶದ ಗಮನ ಈ ಸಭೆಯ ಮೇಲೆ ಇದೆ.

ಪಾಕಿಸ್ತಾನದಿಂದ ಪೈಲೆಟನ್ನು ಬಿಡುಗಡೆಗೊಳಿಸುವ ಸಮಯದಲ್ಲಿ ಪಾಕ್ ದೇಶವು ಕುತಂತ್ರ ನೀತಿಯನ್ನು ಅನುಸರಿಸುವ ಸಾಧ್ಯತೆ ಹೆಚ್ಚಾಗಿರುವ ಕಾರಣ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿರುವ ನಿರ್ಧಾರವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡು ಇದೇ ಸ್ವಾತಂತ್ರವನ್ನು ಭಾರತೀಯ ನೌಕಾಪಡೆ ಗೂ ಸಹ ವಿಸ್ತರಿಸಲಾಗಿದೆ. ಭಾರತೀಯ ವಾಯುಪಡೆ ಹಾಗೂ ಗಡಿಯಲ್ಲಿ ಜಮಾವಣೆ ಗೊಂಡಿರುವ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಮೋದಿ ಅವರು ಈಗ ನೌಕಾಪಡೆ ಗೂ ಸಹ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ಧರಾಗಿ ಇರುವಂತೆ ಸೂಚಿಸಿದ್ದಾರೆ.

ಭಾರತೀಯ ಸೇನೆಯ ಸಂಪೂರ್ಣ ಬಲವನ್ನು ಅರಿತುಕೊಂಡಿರುವ ನರೇಂದ್ರ ಮೋದಿರವರು ಎಲ್ಲಾ ವಿಭಾಗದ ಭಾರತೀಯ ಸೇನೆಗೆ ಇಂದು ಸಂಪೂರ್ಣ ಸ್ವತಂತ್ರವನ್ನು ಘೋಷಿಸಿದ್ದಾರೆ. ಯಾವ ಅಧಿಕಾರಿಯ ಹಂಗೂ ಇಲ್ಲದೆ ತಮ್ಮ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ಪ್ರತಿ ಭಾರತೀಯ ಯೋಧರಿಗೂ ಇರುತ್ತದೆ ಎಂಬ ಮಹತ್ವದ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ. ಈ ಮೂಲಕ ಪಾಕಿಸ್ತಾನವು ಒಂದು ಚಿಕ್ಕ ತಪ್ಪು ಹೆಜ್ಜೆಯನ್ನು ಇಟ್ಟರೂ ಕುತಂತ್ರಿ ದೇಶದ ಸರ್ವ ನಾಶ ಖಚಿತ. ಗಡಿಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.